spot_img
spot_img
spot_img
spot_img
spot_img
spot_img

ಸರಸ್ವತಿ ದೇವಿಯ ಫೋಟೊಗೆ ಕಾಲಿನಿಂದ ಒದ್ದು ಶಿಕ್ಷಕನಿಂದ ಅವಮಾನ; ವಿಡಿಯೋ ವೈರಲ್​

Published on

ಇಲ್ಲೊಬ್ಬ ವ್ಯಕ್ತಿ ಸಿಟ್ಟಿನಿಂದ ಬೊಬ್ಬೆ ಹೊಡೆಯುತ್ತಾ, ಸರಸ್ವತಿ ದೇವಿಯ ಫೋಟೊಗೆ ಕಾಲಿನಿಂದ ಒದೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈತ ಗುಜರಾತ್​ನ ಉದಯಪುರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.

WhatsApp Group Join Now
Telegram Group Join Now

ಗುಜರಾತ್‌ನಲ್ಲಿ ಮದ್ಯ ನಿಷೇಧವಾಗಿದ್ದರೂ ಕೆಲವೊಮ್ಮೆ ಸರ್ಕಾರಿ ನೌಕರರು ಮತ್ತು ಕೆಲವೊಮ್ಮೆ ಕುಡಿದು ವೀಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಛೋಟಾ ಉದೇಪುರ್ ಜಿಲ್ಲೆಯ ಕ್ವಾಂತ್ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ಕುಡಿದ ಮತ್ತಿನಲ್ಲಿ ಶಿಕ್ಷಕನೊಬ್ಬ ಗಲಾಟೆ ಮಾಡುತ್ತಿರುವ ವಿಡಿಯೋ ಇದೀಗ ವೈರಲ್​ ಆಗಿದೆ. ವಿಡಿಯೋದಲ್ಲಿ ಈ ಭೂಪ, ಶಿಕ್ಷಣದ ಅಧಿದೇವತೆಯಾದ ಸರಸ್ವತಿ ಮಾತೆಯ ಚಿತ್ರವನ್ನು ಕುಡಿದು ಒದೆಯುತ್ತಾನೆ.

ವಿಡಿಯೋದಲ್ಲಿ ಪಾನಮತ್ತ ಶಿಕ್ಷಕ ಶಾಲೆಯಲ್ಲಿ ಗಲಾಟೆ ಮಾಡುತ್ತಿರುವ ದೃಶ್ಯ ಕಂಡು ಬರುತ್ತಿದ್ದು ಈತ ಆಣೆ ಪ್ರಮಾಣ ಮಾಡುತ್ತಾ ವಸ್ತುಗಳನ್ನು ಒಡೆದು ಹಾಕುತ್ತಾನೆ. ಅಲ್ಲಿಗೆ ನಿಲ್ಲದ ಈ ಶಿಕ್ಷಕ, ಸರಸ್ವತಿ ಮಾತೆಯ ಚಿತ್ರವನ್ನೂ ಒದ್ದು ಬಿಡುತ್ತಾನೆ. ಕುಡಿದ ಶಿಕ್ಷಕನಿಗೆ ತಾನು ಏನು ಮಾಡುತ್ತಿದ್ದೇನೆ ಎಂಬುದೇ ತಿಳಿದಿರುವುದಿಲ್ಲ. ಈ ಘಟನೆ ಕೆಲವು ದಿನಗಳ ಹಿಂದಿನದು. ಆದರೆ ಇದೀಗ ವಿಡಿಯೋ ವೈರಲ್ ಆಗಿದೆ. ಈಗ ಈ ಶಿಕ್ಷಕನನ್ನೂ ಗುರುತಿಸಲಾಗಿದ್ದು ಈತನ ಹೆಸರು ಯೋಗೇಶ್ ಎಂದು ತಿಳಿದುಬಂದಿದೆ.

ಈ ಬಗ್ಗೆ ಕರ್ನಾಟಕದ ಜನರು ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದು ಅನೇಕರು ಕಟುವಾದ ಶಬ್ದಗಳಲ್ಲಿ ಈತನನ್ನು ಖಂಡಿಸಿದ್ದಾರೆ.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಸಿಸಿಬಿ ಪೊಲೀಸರ ಕಾರ್ಯಾಚರಣೆ – ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಅಂದರ್!

ಮಂಗಳೂರು:- ಜಿಲ್ಲೆಯಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದಕ್ಷಿಣ ಕನ್ನಡ...

ಚಿಕ್ಕೋಡಿ ಮತ್ತು ಬೆಳಗಾವಿಯಲ್ಲಿ ಗೆಲುವು ನಿಶ್ಚಿತ: ಬಿ.ಎಸ್. ಯಡಿಯೂರಪ್ಪ ವಿಶ್ವಾಸ

ಬೆಳಗಾವಿ: ಅತ್ಯಂತ ಸುಳ್ಳು ಹೇಳುವ ಪ್ರಧಾನಿ ಮೋದಿ ಎಂಬ ಸಿಎಂ ಸಿದ್ದರಾಮಯ್ಯ ಟೀಕೆ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಬಿಜೆಪಿ...

ಪಬ್ಲಿಕ್ ನಲ್ಲೇ ರೂಂ ಗೆ ಬೇಗ ಬಾ ಎಂದು ಪತ್ನಿಗೆ ಆರ್ಡರ್ ಮಾಡಿದ ಕ್ರಿಕೆಟರ್ ಜಡೇಜಾ!

ಸಿಎಸ್ ಕೆ ಆಲ್ ರೌಂಡರ್ ರವೀಂದ್ರ ಜಡೇಜಾ ಸೋಷಿಯಲ್ ಮೀಡಿಯಾ ಕಾಮೆಂಟ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ. ರವೀಂದ್ರ ಜಡೇಜಾ...

ಸಮಯ ಬಂದಾಗ ನಾನು ಸುಮಲತಾ ಜೊತೆ ಮಾತಾಡ್ತೀನಿ: HD ಕುಮಾರಸ್ವಾಮಿ!

ಬೆಂಗಳೂರು: ಸುಮಲತಾ ನನಗೆ ಶತ್ರು ಅಲ್ಲ ಎಂದು ಮಾಜಿ ಸಚಿವ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಜೆ.ಪಿ.ನಗರದಲ್ಲಿ...
error: Content is protected !!