ವಿವೇಕವಾರ್ತೆ : ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯಲ್ಲಿ ನಾಗರ ಹಾವಿಗೆ ಡಿಸೇಲ್ ಎರಚಿದ್ದ ವ್ಯಕ್ತಿಯೊಬ್ಬ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಜಿಲ್ಲೆಯ ಕಿನ್ನಿಗೋಳಿ ಬಹುಮಹಡಿ ಕಟ್ಟಡದಲ್ಲಿ ಉತ್ತರ ಕರ್ನಾಟಕ ಮೂಲದ ವ್ಯಕ್ತಿವೋರ್ವ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದನೆಂದು ಹೇಳಲಾಗಿದೆ.
ಈ ಬಹುಮಹಡಿ ಕಟ್ಟಡದ ಸಮೀಪ ನಾಗರ ಹಾವೊಂದು ಹರಿದಾಡುವುದು ಕಾವಲುಗಾರನ ಕಣ್ಣಿಗೆ ಬಿದ್ದಿದೆ. ಆಗ ಹರಿದಾಡುತ್ತಿರುವ ನಾಗರ ಹಾವನ್ನು ಕಂಡ ಕಟ್ಟಡದ ಕಾವಲುಗಾರ ಅದಕ್ಕೆ ಡೀಸೆಲ್ ಎರಚಿದ್ದ ಎನ್ನಲಾಗಿದೆ.
ಡೀಸೆಲ್ ಸುರಿದ ಪರಿಣಾಮ ಉರಿಯಿಂದ ನಾಗರ ಹಾವು ಒದ್ದಾಡತೊಡಗಿದೆ. ಇದನ್ನು ಕಂಡ ಸ್ಥಳೀಯರು ಉರಗ ರಕ್ಷಕ ಯತೀಶ್ ಕಟೀಲು ಅವರಿಗೆ ತಿಳಿಸಿದ್ದಾರೆ. ಸ್ಥಳಕ್ಕಗಮಿಸಿದ ಅವರು ನಾಗರ ಹಾವನ್ನು ರಕ್ಷಣೆ ಮಾಡಿ. ಶ್ಯಾಂಪ್ ಮೂಲಕ ಹಾವಿನ ಮೈ ತೊಳೆದಿದ್ದಾರೆ. ಯಾವಾಗ ನಾಗರ ಹಾವೂ ಸಹಜ ಸ್ಥಿತಿಗೆ ಬಂತೋ ಆಗ ಅದನ್ನು ಕಾಡಿಗೆ ಬಿಟ್ಟಿದ್ದರು ಎನ್ನಲಾಗಿದೆ.
ಇತ್ತ ಕಾಲ ಕಳೆಯುವಷ್ಟರಲ್ಲಿ ಡೀಸೆಲ್ ಎರಚಿದ ಕಾವಲುಗಾರ ಕೂಡ ನಾಗರ ಹಾವೂ ಯಾವ ರೀತಿ ಮೈಯುರಿಯಿಂದ ಬಳಲಿತ್ತೋ ಅದೇ ತರಹ ಮೈಯುರಿಯಿಂದ ಬಳಲಿದ್ದದ್ದು, ಆತನನ್ನು ಆಸ್ಪತ್ರೆಗೆ ದಾಖಲಾಗಿದೆ ಎಂದು ತಿಳಿದು ಬಂದಿದೆ.
https://youtu.be/u6lq_pUsNkA?si=slYMuNpOI988v1PU