ಪ್ರಿಯತಮೆಯ ಬೆತ್ತಲೆ ಫೋಟೋ ಸ್ನೇಹಿತರೊಂದಿಗೆ ಹಂಚಿಕೊಳ್ತಿದ್ದ ವಿಕೃತ ಕಾಮಿ ಅಂದರ್

Published on

spot_img
spot_img

ವಿವೇಕವಾರ್ತೆ: ಅವರಿಬ್ಬರದ್ದು ಸರಿಸುಮಾರು 10 ವರ್ಷದ ಪ್ರೀತಿ. ಇನ್ನೇನು ಮದುವೆಯ ಖುಷಿಯಲ್ಲಿದ್ದ ಆ ಯುವತಿಗೆ ಶಾಕ್ ನೀಡಿತ್ತು ಅದೊಂದು ಫೋಟೋ. ಫೋಟೋ ಬೆನ್ನತ್ತಿದ್ದ ಪೊಲೀಸರು ಆ ಕೇಸ್‌ಗೆ ಬಿಗ್ ಟ್ವಿಸ್ಟ್ ನೀಡಿದ್ದಾರೆ. ಪ್ರಿಯತಮೆಯ ಬೆತ್ತಲೆ ಫೋಟೋಗಳನ್ನು (Nude Photo) ಸ್ನೇಹಿತರೊಂದಿಗೆ ಹಂಚಿಕೊಂಡು ವಿಕೃತ ಆನಂದ ಪಡ್ತಿದ್ದ ಯುವಕ ಪೊಲೀಸರ ಅತಿಥಿಯಾಗಿದ್ದಾನೆ.

ತಮಿಳುನಾಡು ಮೂಲದ ಆ ಯುವಕ-ಯುವತಿ ಸುಮಾರು 10 ವರ್ಷದಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಶಿಕ್ಷಣ ಮುಗಿದ ತಕ್ಷಣ ಮದುವೆ ಆಗೋ ಪ್ಲಾನ್ ಕೂಡ ಮಾಡಿದ್ದರು. ಅಷ್ಟರಲ್ಲಿ ಯುವತಿಯ ಬೆತ್ತಲೆ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಫೋಟೋ ನೋಡಿದ ಯುವತಿ ಪ್ರೀಯಕರನಿಗೆ ವಿಷಯ ಮುಟ್ಟಿಸಿದಳು. ಹೀಗೆಲ್ಲಾ ಆಗಿದ್ಯಾ ನಡೀ ಪೊಲೀಸರಿಗೆ ದೂರು ನೀಡೋಣ ಎಂದು ತಾನೇ ಮುಂದೆ ನಿಂತು ಬೆಂಗಳೂರಿನ ಆಗ್ನೇಯ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದ. ತನಿಖೆ ನಡೆಸಿದ ಪೊಲೀಸರಿಗೆ ಯುವತಿಯ ಪ್ರಿಯಕರನೇ ಫೋಟೋ ಲೀಕ್ ಮಾಡಿರೋದು ಪತ್ತೆಯಾಗಿದೆ.

ಪೊಲೀಸರ ಅತಿಥಿಯಾಗಿರುವ ಆರೋಪಿ ಸಂಜಯ್ ನಗರದ ಖಾಸಗಿ ಕಾಲೇಜಿನಲ್ಲಿ ಬಿಇ ಪ್ಲಾನಿಂಗ್ ಕೋರ್ಸ್ ಮಾಡುತ್ತಿದ್ದ. ಈ ಜೋಡಿ ಮದುವೆಯಾಗುವುದಕ್ಕೂ ಮೊದಲೇ ದೈಹಿಕ ಸಂಬಂಧವನ್ನೂ ಬೆಳೆಸಿದ್ದರು. ಈ ವೇಳೆ ತೆಗೆದುಕೊಂಡ ಬೆತ್ತಲೆ ಫೋಟೋಗಳನ್ನು ಪ್ರಿಯಕರ ಸಂಜಯ್ ಟೆಲಿಗ್ರಾಂನ ಸ್ನೇಹಿತರ ಗ್ರೂಪ್‌ನಲ್ಲಿ ಶೇರ್ ಮಾಡಿಕೊಂಡಿದ್ದ. ಅಷ್ಟೇ ಅಲ್ಲದೇ ಪ್ರಿಯತಮೆ ಸೇರಿದಂತೆ ಆಕೆಯ ಸ್ನೇಹಿತರು, ಪರಿಚಿತ ಯುವತಿಯರ ಫೋಟೋಗಳನ್ನು ಕೂಡಾ ಬೆತ್ತಲೆಯಾಗಿ ನೋಡೋಕೆ ಅಂತಲೇ, ಬಾಟ್ ಅನ್ನೋ ಆ್ಯಪ್ ಕಂಡು ಹಿಡಿದಿದ್ದ. ಆ ಆ್ಯಪ್‌ನಲ್ಲಿ ಯಾವುದೇ ಯುವತಿಯ ಫೋಟೋ ಅಪ್ಲೋಡ್ ಮಾಡಿದರೂ ಅದು ಬೆತ್ತಲೆಯಾಗಿ ತೋರಿಸುತ್ತಿತ್ತು. ಅದನ್ನು ನೋಡಿ ಸಂಜಯ್ ವಿಕೃತ ಖುಷಿಪಡ್ತಿದ್ದ.


ಈ ಎಲ್ಲಾ ವಿಚಾರಗಳು ತನಿಖೆಯಲ್ಲಿ ಗೊತ್ತಾಗುತ್ತಿದ್ದಂತೆ ಆರೋಪಿಯನ್ನು ಪೊಲೀಸರು ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.

ಕೃಪೆ

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!