Wednesday, September 27, 2023

ಭಾರತದ ಸಂಸದರ ತಿಂಗಳ ಸಂಬಳವೆಷ್ಟು ಗೊತ್ತಾ ? ವೇತನದ ಜೊತೆ ಸಿಗುತ್ತೆ ಇಷ್ಟೆಲ್ಲಾ ಭತ್ಯೆ..!

ಪ್ರತಿ 5 ವರ್ಷಗಳಿಗೊಮ್ಮೆ ನಾವು ಮತದಾನದ ಮೂಲಕ ಸಂಸದರನ್ನು ಆಯ್ಕೆ ಮಾಡುತ್ತೇವೆ. ನಂತರ ಅವರು ಲೋಕಸಭೆಯಲ್ಲಿ ನಮ್ಮ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುವುದು, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಕೂಡ ಸಂಸದರ ಆದ್ಯ ಕರ್ತವ್ಯ.

ಇದಕ್ಕಾಗಿ ಸಂಸದರು ಪ್ರತಿ ತಿಂಗಳು ಎಷ್ಟು ಸಂಬಳ ಪಡೆಯುತ್ತಾರೆ? ಯಾವ್ಯಾವ ಭತ್ಯೆ ಅವರಿಗೆ ಸಿಗುತ್ತಿದೆ ಅನ್ನೋದು ಗೊತ್ತಾ?

ಭಾರತದಲ್ಲಿ ಪ್ರತಿಯೊಬ್ಬ ಸಂಸದ ಪ್ರತಿ ತಿಂಗಳು ಮೂಲ ವೇತನವಾಗಿ 1 ಲಕ್ಷ ರೂಪಾಯಿ ಪಡೆಯುತ್ತಾರೆ. ಇದಲ್ಲದೇ ಅವರಿಗೆ ಕಚೇರಿ ಭತ್ಯೆಯಾಗಿ 54 ಸಾವಿರ ಹಾಗೂ ಕ್ಷೇತ್ರ ಭತ್ಯೆಯಾಗಿ 49 ಸಾವಿರ ರೂಪಾಯಿ ಬರುತ್ತದೆ. ಒಟ್ಟಾರೆ ಪ್ರತಿ ತಿಂಗಳು ಸಂಸದರಿಗೆ ನಿಗದಿತ ವೇತನವಾಗಿ ಸುಮಾರು 2 ಲಕ್ಷ ರೂಪಾಯಿ ದೊರೆಯುತ್ತದೆ.

ಸಂಬಳದ ಹೊರತಾಗಿ ಸಂಸದರು ಪಡೆಯುವ ಭತ್ಯೆಗಳು

ಸಂಸದರಿಗೆ ನೇರ ಬಾಕಿಯಾಗಿ ವಾರ್ಷಿಕ 3 ಲಕ್ಷ 80 ಸಾವಿರ ರೂಪಾಯಿ ನೀಡಲಾಗುತ್ತದೆ. ವಿಮಾನ ಪ್ರಯಾಣ ಭತ್ಯೆಯಾಗಿ ವಾರ್ಷಿಕ 4 ಲಕ್ಷ 8 ಸಾವಿರ ರೂ. ರೈಲು ಪ್ರಯಾಣ ಭತ್ಯೆ ವಾರ್ಷಿಕ 5 ಸಾವಿರ ರೂಪಾಯಿ, ನೀರಿನ ಭತ್ಯೆ ವಾರ್ಷಿಕ 4 ಸಾವಿರ ರೂಪಾಯಿ, ವಿದ್ಯುತ್‌ ಭತ್ಯೆ ವಾರ್ಷಿಕ 4 ಲಕ್ಷ ರೂಪಾಯಿ ಸಂಸದರಿಗೆ ಲಭ್ಯವಿರುತ್ತದೆ. ಪ್ರತಿ ತಿಂಗಳು ಸಂಸದರು ಕೈತುಂಬಾ ಹಣ ಪಡೆಯುತ್ತಾರೆ. ಸಂಸದರ ನಿಗದಿತ ವೇತನ ಮತ್ತು ಇತರೆ ಭತ್ಯೆಗಳನ್ನು ಸೇರಿಸಿದರೆ ಅವರಿಗೆ ಸರ್ಕಾರದಿಂದ ಪ್ರತಿ ತಿಂಗಳು 3 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಮೊತ್ತ ನೀಡಲಾಗುತ್ತದೆ. ಪ್ರತಿ ಸಂಸದರ ವಾರ್ಷಿಕ ವೆಚ್ಚವೇ 36 ಲಕ್ಷ ರೂಪಾಯಿ.

ಸಂಬಳದ ಮೇಲೆ ತೆರಿಗೆ ಇಲ್ಲ !

ವಿಶೇಷವೆಂದರೆ ಸಂಸದರ ಸಂಬಳಕ್ಕೆ ತೆರಿಗೆ ಇಲ್ಲ. ಇದಲ್ಲದೇ ವಾಸಕ್ಕೆ ಸರಕಾರಿ ಬಂಗಲೆಯೂ ಲಭ್ಯವಿದೆ. ಬಂಗಲೆಯ ಪೀಠೋಪಕರಣಗಳು, ಎಸಿ ಮತ್ತು ನಿರ್ವಹಣೆಗೆ ಅವರು ಹಣ ಪಾವತಿಸಬೇಕಾಗಿಲ್ಲ. ಹೀಗೆ ಸರ್ಕಾರದಿಂದ ಸಕಲ ಸೌಲಭ್ಯ ಪಡೆದರೂ ಕೆಲ ಸಂಸದರು ಜನಪರ ಕೆಲಸಗಳನ್ನು ಮಾಡದೇ ಇರುವುದು ದುರಂತವೇ ಸರಿ.

RELATED ARTICLES

ಸಂಕ್ರಾಂತಿ ವೇಳೆಗೆ ರಾಜ್ಯದಲ್ಲಿ ಕೆಲ ಅವಘಢ ; ದೇಶದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ : ಕೋಡಿಮಠ ಶ್ರೀ.!

ವಿವೇಕ ವಾರ್ತೆ : ಲೋಕಸಭಾ ಚುನಾವಣೆ ಬಗ್ಗೆ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಪ್ರಮುಖ ಭವಿಷ್ಯವೊಂದನ್ನು ನುಡಿದಿದ್ದಾರೆ. https://youtu.be/u6lq_pUsNkA?si=YWlDzZ4FEqGXLL4M ಮುಂದಿನ ಚುನಾವಣೆಯಲ್ಲಿ ದೇಶದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ. ಅಮಾವಾಸ್ಯೆಯ ಬಳಿಕ ಕರ್ನಾಟಕದಲ್ಲಿ ಭಾರೀ...

PM Narendra Modi Horoscope: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ಜಾತಕ ವಿಶ್ಲೇಷಣೆ

ವಿವೇಕವಾರ್ತೆ : 2028ರ ಜೂನ್ ವೇಳೆಗೆ ನರೇಂದ್ರ ಮೋದಿ ಅವರ ಜನ್ಮ ಜಾತಕದ ಪ್ರಕಾರ ಕುಜ-ರಾಹು ಸಂಧಿ ಕಾಲ (ಅಂದರೆ ಕುಜ ದಶೆ ಮುಗಿದು ರಾಹು ದಶೆ ಆರಂಭ ಆಗುವ ಕಾಲ). ಇದು...

ನಿಮ್ಮ ಮೊಬೈಲ್ ನಲ್ಲಿ `ಡೇಟಾ’ ಬೇಗನೆ ಖಾಲಿಯಾಗುತ್ತದೆಯೇ? ಜಸ್ಟ್ ಈ ಸೆಟ್ಟಿಂಗ್ ಆಫ್ ಮಾಡಿ!

ವಿವೇಕವಾರ್ತೆ : ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಇಂಟರ್ನೆಟ್ ಅನ್ನು ಬಳಸುತ್ತೀರಾ ಮತ್ತು ಅದು ಬೇಗನೆ ಕೊನೆಗೊಳ್ಳುವುದರಿಂದ ಅಸಮಾಧಾನಗೊಳ್ಳುತ್ತೀರಾ. ಅಂತಹ ಪರಿಸ್ಥಿತಿಯಲ್ಲಿ, ನೀವು ಇನ್ನು ಮುಂದೆ ಚಿಂತಿಸಬೇಕಾಗಿಲ್ಲ. ಈ 5 ಸಲಹೆಗಳು ಮತ್ತು ತಂತ್ರಗಳೊಂದಿಗೆ ಡೇಟಾವನ್ನು...
- Advertisment -

Most Popular

ಗೋಕಾಕ : ಹಣಕಾಸಿನ ವಿಚಾರಕ್ಕೆ ಯೋಧನಿಂದಲೇ ಮತ್ತೋರ್ವ ಯೋಧನ ಮೇಲೆ ಫೈರಿಂಗ್.!

ವಿವೇಕ ವಾರ್ತೆ : ಓರ್ವ ಯೋಧನಿಂದ ಮತ್ತೊಬ್ಬ ಯೋಧನ ಮೇಲೆ ಪೈರಿಂಗ್ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ರಾಜನಕಟ್ಟಿಯಲ್ಲಿ ನಡೆದಿದೆ. ರಾಜನಕಟ್ಟೆ ಗ್ರಾಮದ ಇಬ್ಬರು ವ್ಯಕ್ತಿಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ....

ಬ್ಯಾಕ್ ಪ್ಲಿಪ್ ಮಾಡಲು ಹೋಗಿ ಫೇಲ್ ಆದ ಯುವಕ : ‘ಇದರ ಅಗತ್ಯ ಇತ್ತೇ’ ಎಂದ ನೆಟ್ಟಿಗರು ; ವಿಡಿಯೋ ವೈರಲ್.!

ವಿವೇಕವಾರ್ತೆ : ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಕೆಲ ಯುವಕ ಯುವತಿಯರ ಹುಚ್ಚಾಟದ ವಿಡಿಯೋಗಳು ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರೈಲಿನ ಬೋಗಿಯೊಳಗೆ ವಿಡಿಯೋ ಚಿತ್ರೀಕರಣದ ನಿಷೇಧದ ಹೊರಾತಗಿಯೂ ಇಂಥ ಪ್ರವೃತ್ತಿಗಳು ಮುಂದುವರೆಯುತಲೇ ಇವೆ. ಆ...

ಕಾರಿಗೆ ಡಿಕ್ಕಿ ಹೊಡೆದ ಲಾರಿ : ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವು..!

ವಿವೇಕವಾರ್ತೆ : ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿ ಕಾರಿಗೆ ಲಾರಿ ಡಿಕ್ಕಿಯಾದ ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾದ ನಡೆದಿದೆ. ಮೃತ ದುರ್ದೈವಿಗಳನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆಕಾಶ್ (20), ಹೇಮಂತ್ (28)...

ಕುಂಬಳಕಾಯಿ ಬೀಜ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು.!

ವಿವೇಕವಾರ್ತೆ : ಕುಂಬಳಕಾಯಿ ಬೀಜಗಳು ತುಂಬಾ ಚಿಕ್ಕದಾಗಿದ್ದರೂ, ನಮ್ಮ ವ್ಯವಸ್ಥೆಗಳು ಅವಲಂಬಿಸಿರುವ ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಕುಂಬಳಕಾಯಿಯ ಚಿಕ್ಕ ಬೀಜಗಳು ನಾವು ಅಂದಾಜಿಸುವುದಕ್ಕಿಂತ ಹೆಚ್ಚಿನ ಪೋಷಕಾಂಶಗಳಿಂದ ತುಂಬಿವೆ.‌ ಕುಂಬಳಕಾಯಿ ಬೀಜಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು...
error: Content is protected !!