ಸಿನೆಮಾ ನೋಡಲು ಫರ್ಮಿಷನ್ ಕೊಡದಿದ್ದರೆ ನಿಮ್ಮ ಸಾವು ಖಚಿತ ; ಮಗನಿಂದ ತಂದೆಗೆ ಬೆದರಿಕೆ ಪತ್ರ.!

Published on

spot_img
spot_img

ವಿವೇಕವಾರ್ತೆ : ಮಕ್ಕಳು ತಮ್ಮ ಕಾರ್ಯ ಸಾಧನೆಗಾಗಿ ಎಷ್ಟು ಚುರುಕಾಗಿರುತ್ತಾರೆ ಎನ್ನುವುದಕ್ಕೆ ಈಗ ವೈರಲ್ ಆಗಿರೋ ಪತ್ರವೇ ಸಾಕ್ಷಿ.

ಬಾಲಕ ಸಿನೆಮಾ ನೋಡುವ ಆಸೆಯ ಹಿನ್ನಲೆಯಲ್ಲಿ ತನ್ನ ತಂದೆಗೆ ಪತ್ರವನ್ನು ಬರೆದಿದ್ದಾನೆ. ಸದ್ಯ ಆ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

“ಐರನ್‌ ಮ್ಯಾನ್‌ (Iron Man)” ಸಿನಿಮಾ ವೀಕ್ಷಿಸಲು ಅನುಮತಿ ನೀಡದೆ ಹೋದರೇ ನಿಮ್ಮ ಸಾವು ಖಚಿತ ಎಂದು ಎಂಟು ವರ್ಷದ ಬಾಲಕನೊಬ್ಬ ತನ್ನ ತಂದೆಗೆ ಬೆದರಿಕೆ ಪತ್ರವೊಂದನ್ನು ಬರೆದಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪತ್ರವನ್ನು ಸ್ವತಃ ಬಾಲಕ ತನ್ನ ಕೈಬರಹದಲ್ಲೇ ಬರೆದಿದ್ದಾನೆ. “ಆತ್ಮೀಯ ಜೋಯಲ್ ಬೆರ್ರಿ, ನಿಮ್ಮ ಮಕ್ಕಳಿಗಾಗಿ ನೀವು ಇಂದು ರಾತ್ರಿ ಐರನ್ ಮ್ಯಾನ್ ಅನ್ನು ವೀಕ್ಷಿಸಲು ಅವಕಾಶ ನೀಡಬೇಕು. ಅನುಮತಿ ನೀಡದೇ ಹೋದರೇ ನಿಮ್ಮ ಸಾವು ಖಚಿತ”. ಎಂದು ಬರೆದಿದ್ದಾನೆ. ಮತ್ತು ಬರಹದ ಕೆಳಗೆ From, government ಅಂತ ಬರೆದಿದ್ದಾನೆ. ಬಾಲಕ ಬರೆದಿರುವುದರ ಅರ್ಥವೆನೆಂದರೆ, ಇದು ಸರ್ಕಾರವೇ ನಿಮಗೆ ಬರೆಯುತ್ತಿರುವ ಪತ್ರ ಇದನ್ನು ಕಡೆಗಣಿಸಬೇಡಿ. ಮಕ್ಕಳಿಗೆ ಸಿನಿಮಾ ನೋಡಲು ಅನುಮತಿ ನೀಡಬೇಕು ಎನ್ನುವುದು ಪತ್ರ ಬರೆದಿರುವುದರ ಉದ್ದೇಶವಾಗಿದೆ.

ಮಗ ಬರೆದ ಪತ್ರವನ್ನು ತಂದೆ ಬೆರ್ರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್​​ 82 ಸಾವಿರಕ್ಕೂ ಹೆಚ್ಚಿನ ಲೈಕ್​​ ಪಡೆದುಕೊಂಡಿದೆ.

https://twitter.com/JoelWBerry/status/1705580818855248308/photo/1?ref_src=twsrc%5Etfw%7Ctwcamp%5Etweetembed%7Ctwterm%5E1705580818855248308%7Ctwgr%5E1e37a0dec9a5717649da8edf5dcd18d77803b4a8%7Ctwcon%5Es1_&ref_url=https%3A%2F%2Fjanaspandhan.com%2Fjsn%2F159779

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!