ವಿವೇಕವಾರ್ತೆ :ಬೆಳಗಾವಿ ಜಿಲ್ಲೆಯಲ್ಲಿ ನೀರಿನಲ್ಲಿ ಈಜಲು ಕೆರೆಗೆ ಹೋಗಿ ದ್ದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ ಇನ್ನೊಬ್ಬ ಬಾಲಕನೂ ನೀರಿಗೆ ಬಿದ್ದಿದ್ದು, ಆತನನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತಪಟ್ಟ ಬಾಲಕ ಅಸದ್ ಅಗಸಿಮನಿ ಮತ್ತು ರಕ್ಷಿಸಲ್ಪಟ್ಟ ಸ್ವಯಂಪಾಗಾದ್
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬಸರಖೋಡ ಗ್ರಾಮದಲ್ಲಿ ಘಟನೆ ನಡೆದಿದೆ ಅಸದ್ ಅಗಸಿಮನಿ(10) ನೀರಲ್ಲಿ ಮುಳುಗಿ ಮೃತಪಟ್ಟ ಬಾಲಕನಾದರೆ ಸ್ವಯಂ ಪಾಗಾದ್ (10) ಸ್ಥಳೀಯರಿಂದ ರಕ್ಷಿಸಲ್ಪಟ್ಟ ಹುಡುಗ.
ಈ ಹತ್ತು ವರ್ಷದ ಬಾಲಕರಿಬ್ಬರೂ ಅಕ್ಕಪಕ್ಕದ ಮನೆಯವರಾಗಿದ್ದು, ಗೆಳೆಯರು. ಸೋಮವಾರ ಮುಂಜಾನೆ ಅವರಿಬ್ಬರೂ ಬಸರಖೋಡರ ಕೆರೆಗೆ ಈಜಲು ತೆರಳಿದ್ದರು. ಈ ವೇಳೆ ಇಬ್ಬರೂ ನೀರುಪಾಲಾಗಿದ್ದಾರೆ. ಒಬ್ಬ ಹೇಗೋ ನೀರಿನಿಂದ ಮೇಲೆದ್ದು ಬಂದಿದ್ದಾನೆ.
ಸ್ವಯಂ ಪಾಗಾದಿ ಎಂಬ ಬಾಲಕನಿಗೆ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದ ಬಸರಖೋಡ ಗ್ರಾಮದಲ್ಲಿ ಶೋಕ ಮಡುಗಟ್ಟಿದ ವಾತಾವರಣ ಕಂಡುಬಂದಿದೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.