ಇನ್ನೊಬ್ಬರನ್ನು ಹಿಯ್ಯಾಳಿಸೋ ಮುಂಚೆ ನಮ್ಮ ಯೋಗ್ಯತೆ ತಿಳಿದಿರಲಿ. ಈ ಹುಡುಗ ಯಾರು ಗೊತ್ತಾ?
ಫೇಸ್ಬುಕ್ ಹಾಗೂ ವಾಟ್ಸಪ್ ಗಳಲ್ಲಿ ಈ ಹುಡುಗನ ಫೋಟೋ ತುಂಬಾ ವೈರಲ್ ಆಗಿತ್ತು. ಕೆಲವರಂತೂ ಈ ಹುಡುಗನ ಫೋಟೋ ಹಾಕಿ ದೇವರೇ ನಿನಗೆ ಕಣ್ಣಿ,ಲ್ವಾ, ಕರುಣೆ ಇಲ್ವಾ ಈ ಹುಡುಗನಿಗೆ ಇಂತ ಹುಡುಗಿನಾ ನಾವೇನು ಖರ್ಮ ಮಾಡಿದ್ವಿ ಹಾಗೆ ಈಗೆ ಅಂತ ಫೇಸ್ಬುಕ್ ಹಾಗು ವಾಟ್ಸಪ್ ಗಳಲ್ಲಿ ಟ್ರೊಲ್ ಮಾಡಿದ್ರು. ಆದರೆ ಅವನು ಯಾರು ಅವನು ಮಾಡಿರೋ ಸಾಧನೆ ಏನು ಅವನ ಹಿನ್ನೆಲೆ ಏನು ಅನ್ನೋದನ್ನ ತಿಳಿಕೊಳ್ಳೋದಕ್ಕೆ ತುಂಬಾ ಜನ ಪ್ರಯತ್ನ ಪಡಲಿಲ್ಲ. ಸ್ನೇಹಿತರೇ ಈ ಹುಡುಗನ ಹೆಸರು ಅರುಣ್ ಕುಮಾರ್, ಅರುಣ್ ಕುಮಾರ್ ಎಂದರೆ ಯಾರಿಗೂ ಗೊತ್ತಾಗೋದಿಲ್ಲ. ಅಟ್ಲಿ ಎಂದು ಕರೆಯಬೇಕಾಗುತ್ತೆ ಏಕೆಂದರೆ ಈತ ಫೇಮಸ್ ಆಗಿರೋದು ಅಟ್ಲಿ ಎಂಬ ಹೆಸರಿನಿಂದ. ಈತ ಹುಟ್ಟಿದ್ದು ಸೆಪ್ಟೆಂಬರ್ 21, 1986 ರಲ್ಲಿ ತಮಿಳುನಾಡಿನ ಮದುರೈನಲ್ಲಿ ಜನನ ಆಗುತ್ತೆ ಇನ್ನು ಇವರ ವಿದ್ಯಾಭ್ಯಾಸ ನೋಡೋದಾದ್ರೆ ಬಿ.ಎಸಿ ಕಂಪ್ಲೀಟ್ ಮಾಡಿದ್ದಾರೆ.
ಈತ ತನ್ನ ವಿದ್ಯಾಭ್ಯಾಸವನ್ನ ಮುಗಿಸಿದ ನಂತರ ಚಿತ್ರರಂಗದ ಕಡೆ ಹೆಚ್ಚು ಹೊಲವಿದ್ದ ಕಾರಣ ಭಾರತ ಚಿತ್ರರಂಗ ಕಂಡ ಯಶಸ್ವಿ ನಿರ್ದೇಶಕ ಶಂಕರ್ ಅವರ ಅತ್ತಿರ ಅಸಿಸ್ಟೆಂಟ್ ಹಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಇಂದಿರನ್, ಸೇರಿದಂತೆ ಈ ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅರುಣ್ ಕುಮಾರ್ ಅವರಿಗೆ ಒಳ್ಳೆ ಅವಕಾಶ ಕೂಡ ಬಂತು. ನಂತರ ಆತ ಸ್ವತಂತ್ರ ನಿರ್ದೇಶಕನಾಗಿ 2013 ರಲ್ಲಿ ರಾಜ ರಾಣಿ ಅನ್ನೋ ಸಿನಿಮಾನ ನಿರ್ದೇಶನ ಮಾಡುತ್ತಾರೆ ಆ ಚಿತ್ರ ಸೂಪರ್ ಹಿಟ್ ಹಾಗುತ್ತೆ ಮತ್ತೆ ಬೇರೆ ಭಾಷೆಗಳಿಗೂ ಕೂಡ ಡಬ್ ಆಗುತ್ತೆ ಮತ್ತೆ ಕೆಲವು ಭಾಷೆಗಳಲ್ಲಿ ರಿಮೇಕ್ ಕೂಡ ಆಗುತ್ತೆ.ಮತ್ತೆ ನಂತರ 2016 ರಲ್ಲಿ ವಿಜಯ್ ಅವರನ್ನ ಆಕ್ಕೊಂಡು ತೇರಿ ಅನ್ನೋ ಸಿನಿಮಾವನ್ನ ನಿರ್ದೇಶನ ಮಾಡುತ್ತಾರೆ. ಅದು ಕೂಡ ಸೂಪರ್ ಹಿಟ್ ಆಗುತ್ತೆ ಮತ್ತೆ 2017 ರಲ್ಲಿ ಮತ್ತೆ ವಿಜಯ್ ಅವರ ನಟನೆಯಲ್ಲಿ ಮೆರ್ಸೆಲ್ ಅನ್ನೋ ಸಿನಿಮಾವನ ನಿರ್ದೇಶನ ಮಾಡುತ್ತಾರೆ ಅದು ಕೂಡ ಸೂಪರ್ ಹಿಟ್ ಆಗುತ್ತೆ. ಇತರ ಆತ ನಿರ್ದೇಶನ ಮಾಡಿರುವಂತಹ ಚಿತ್ರಗಳೆಲ್ಲ ಸೂಪರ್ ಹಿಟ್ ಆಗುತ್ತೆ.
ಮತ್ತೆ ತಮಿಳುನಾಡಿನ ಸ್ಟಾರ್ ನಟರು ಈತನ ನಿರ್ದೇಶನದಲ್ಲಿ ಕೆಲಸ ಮಾಡುವುದಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ಈತನ ಅಸೆ ಮಾತ್ರ ರಜನಿಕಾಂತ್ ಅವರನ್ನ ಆಕ್ಕೊಂಡು ಸಿನಿಮಾವನ್ನ ಮಾಡಲು ತುಂಬ ಆಸೆ ಇದೆ. ಮತ್ತೆ ಆತ ಚಿತ್ರವನ್ನ ನಿರ್ದೇಶನ ಮಾಡಿ ಕೊಡುವುದಕ್ಕೆ ಆತ ಪಡೆಯುತ್ತಿರುವ ಸಂಭಾವನೆ ಒಂದೂವರೆ ಕೋಟಿ ರೂಪಾಯಿ. ಮತ್ತೆ ಆತ ಕ್ರಷ್ಣ ಪ್ರ್ರಿಯ ಅನ್ನೋ ನಟಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಸ್ನೇಹಿತರೆ ಮನುಷ್ಯನ ಬಣ್ಣ ನೋಡಿ ಆತನ ಸೌಂದರ್ಯ ನೋಡಿ ಅವರ ಯೋಗ್ಯತೆಯನ್ನ ಅಳಿಯೋದಕ್ಕೆ ಹೋಗಬಾರದು. ಏಕೆಂದರೆ ಪ್ರತಿಭೆ ಅನ್ನೋದು ಯಾರಪ್ಪನ ಸ್ವತ್ತು ಅಲ್ಲ ಅದು ಸುಂದರವಾಗಿ ಇರೋರು ಬಳಿನೇ ಇರಬೇಕು ಶ್ರೀಮಂತನ ಬಳಿ ಇರಬೇಕು ಒಂದು ಕಾನೂನು ಇಲ್ಲ. ಶ್ರದ್ದೆ ಮತ್ತು ಶ್ರಮ ಎರಡು ಇದ್ದರೆ ಯಾರು ಬೇಕಾದರೂ ತಮ್ಮ ಕನಸನ್ನ ನನಸು ಮಾಡಿಕೊಳ್ಳಬಹುದು..