ಮೆಟ್ರೋದಲ್ಲಿ ಅಸಹ್ಯ ವರ್ತನೆ ತೋರಿದ ಯುವ ಜೋಡಿ : ವಿಡಿಯೋ ವೈರಲ್ ; ನೆಟ್ಟಿಗರಿಂದ ಫುಲ್‌ ಕ್ಲಾಸ್..!

Published on

spot_img
spot_img

ವಿವೇಕವಾರ್ತೆ : ದಿಲ್ಲಿ ಮೆಟ್ರೋ ವಿವಾದಗಳಿಂದಲೇ ಆಗಾಗ ಸುದ್ದಿಯಾಗುತ್ತಿರುತ್ತದೆ. ಈಗ ಮತ್ತೊಂದು ಕೆಟ್ಟ ಕಾರಣಕ್ಕೆ ದಿಲ್ಲಿ ಮೆಟ್ರೋ ಸುದ್ದಿಯಲ್ಲಿದೆ. ದಿಲ್ಲಿ ಮೆಟ್ರೋ ರೈಲಿನ ಒಳಗೆ ಯುವ ಜೋಡಿಯೊಂದು ಅನುಚಿತ ವರ್ತನೆ ತೋರಿದ್ದು, ನೆಟ್ಟಿಗರು ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಸದ್ಯ ವೈರಲ್‌ ಆಗಿರೋ ವಿಡಿಯೋದಲ್ಲಿ ಮೆಟ್ರೋದಲ್ಲಿ ಪ್ರಯಾಣಿಕರ ಮಧ್ಯೆಯೇ ಯುವ ಜೋಡಿಯೊಂದು ತಂಪು ಪಾನಿಯ ಮತ್ತು ನೂಡಲ್ಸ್‌ ಅನ್ನು ಪರಸ್ಪರ ಬಾಯಿಯಲ್ಲೇ ಹಂಚಿಕೊಂಡಿದೆ. ಈ ಅನುಚಿತ ವರ್ತನೆಗೆ ಭಾರೀ ಟೀಕೆ ವ್ಯಕ್ತವಾಗಿದ್ದು, ಹಲವರು ಈ ಜೋಡಿಗೆ ಶಿಕ್ಷೆಯಾಗಬೇಕು ಎಂದು ಕಿಡಿಕಾರಿದ್ದಾರೆ.

ದಿಲ್ಲಿ ಮೆಟ್ರೋದಲ್ಲಿ ಪ್ರಯಾಣಿಕರ ನಡುವೆಯೇ ಯುವ ಜೋಡಿ ಪೈಕಿ ಪ್ರಿಯಕರ ಮೊದಲಿಗೆ ತಂಪು ಪಾನೀಯವನ್ನು ತನ್ನ ಪ್ರೇಯಸಿಗೆ ಕುಡಿಸುತ್ತಾನೆ. ನಂತರ ಆಕೆ ತನ್ನ ಬಾಯಿಯಿಂದ ಆ ಪಾನೀಯವನ್ನು ಪ್ರಿಯಕರನ ಬಾಯಿಗೆ ಉಗುಳುತ್ತಾಳೆ. ಮತ್ತೇ  ಪ್ರಿಯಕರ ಪುನಃ ಪ್ರೇಯಸಿಯ ಬಾಯಿಗೆ ಉಗುಳುವ ದೃಶ್ಯ ಸೆರೆಯಾಗಿದೆ. ಹೀಗೆಯೇ ಈ ಕ್ರಿಯೆಯನ್ನು ಯುವ ಜೋಡಿ ಪುನರಾವರ್ತಿಸುತ್ತಾರೆ. ಅಲ್ಲೇ ಇದ್ದ ಪ್ರಯಾಣಿಕರು ಈ ಅನಿರೀಕ್ಷಿತ ಘಟನೆಯಿಂದ ಶಾಕ್‌ಗೆ ಒಳಗಾಗಿದ್ದಾರೆ.

ಈ ಜೋಡಿಯ ಅಸಹ್ಯ ವರ್ತನೆ ಇಲ್ಲಿಗೆ ಮುಗಿಯುವದಿಲ್ಲ. ಮತ್ತೊಂದು ವಿಡಿಯೋದಲ್ಲಿ ಅದೇ ಪ್ರಿಯಕರ ತನ್ನ ಪ್ರಿಯತಮೆಯ ಬಾಯೊಳಗೆ ನೂಡಲ್ಸ್‌ ಹಾಕುತ್ತಾನೆ. ನಂತರ ಬಾಯಲ್ಲಿ ಹಾಕಿದ ನೂಡಲ್ಸ್ ಸ್ಪೂನ್‌ನಲ್ಲಿ ತೆಗೆದು ಅದನ್ನು ಆತ ಸೇವಿಸುತ್ತಾನೆ. ಸದ್ಯ ಈ ಎರಡು ಅಸಹ್ಯ ವಿಡಿಯೊ ವೈರಲ್‌ ಆಗಿದ್ದು, ನೆಟ್ಟಿಗರು ಈ ಜೋಡಿಯ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ಅಸಹ್ಯ ವರ್ತನೆಯ ವಿಡಿಯೋ ನೋಡಿದ ಅನೇಕ ನೆಟ್ಟಿಗರು ಗರಂ ಆಗಿದ್ದು, ಇಂತಹ ಘಟನೆ ಪುನರಾವರ್ತೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು ಈ ಜೊಡಿ ಬಗ್ಗೆ ಹೇಳುವುದಾದರೆ, ಕೆಲವು ತಿಂಗಳಿಂದ ಈ ಜೋಡಿ ಹಲವು ವಿಡಿಯೊ ಅಥವಾ ಇಸ್ಟಾಗ್ರಾಮ್‌ ರೀಲ್‌ಗಳ ಮೂಲಕ ವಿವಾದ ಸೃಷ್ಟಿಸುತ್ತಿದೆ. ಇವರು ನೃತ್ಯ ಮಾಡುವ ಮೂಲಕ ಸಾರ್ವಜನಿಕವಾಗಿ ಚುಂಬಿಸಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಮಾರ್ಚ್‌ನಲ್ಲಿ ದಿಲ್ಲಿ ಮೆಟ್ರೋ ರೈಲಿನ ಒಳಗೆ ಚಿತ್ರೀಕರಣ ನಿಷೇಧಿಸಲಾಗಿದೆ. ಆದರೂ ಇಂತಹ ಅಸಹ್ಯ ವಿಡಿಯೋಗಳನ್ನು ಮಾಡುವುದು ಮಾತ್ರ ಮುಂದುವರೆದೆ ಇದೆ. ಘಟನೆ ನಂತರ ʼಎಕ್ಸ್‌ʼ ಮೂಲಕ ಡಿಎಂಆರ್‌ಸಿ, ʼಪ್ರಯಾಣಿಸಿ ಆದರೆ ತೊಂದರೆ ಉಂಟು ಮಾಡಬೇಡಿʼ ಎಂದು ಮನವಿ ಮಾಡಿದೆ.

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!