spot_img
spot_img
spot_img
spot_img
spot_img
spot_img

ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕಳ್ಳತನ ಮಾಡಿದವರು ಈಗ ಪೋಲಿಸರ ಅತಿಥಿ…!

Published on

ಚಿಕ್ಕೋಡಿ: ಪಟ್ಟಣದಲ್ಲಿರುವ ಫಿನ್ ಕೇರ್ ಸ್ಮಾಲ್ ಪೈನಾನ್ಸ ಬ್ಯಾಂಕಿನ ಮ್ಯಾನೇಜರ್ ಗುರನಾಥ ಈರಪ್ಪ ಕಳಸನ್ನವರ ಸಾ|| ಮುಗಳ ತಾ|| ಚಿಕ್ಕೋಡಿ ಇವರು ದಿನಾಂಕ: 11/09/2022 ರಂದು ಪಿರ್ಯಾದಿ ನೀಡಿದ್ದು, ಸದರಿ ಫಿನ್ ಕೇರ್ ಸ್ಮಾಲ್ ಪೈನಾನ್ಸ ಬ್ಯಾಂಕನ್ನು ಯಾರೋ ಆರೋಪಿತರು ದಿನಾಂಕ: 10/09/2022 ರಂದು 2030 ಗಂಟೆಯಿಂದ ದಿನಾಂಕ: 11.09.2022 ರಂದು 1945 ಗಂಟೆಯ ನಡುವಿನ ವೇಳೆಯಲ್ಲಿ ಹಾಕಿದ ಕೀಲಿ ಮುರಿದು ಬ್ರೇಜರಿಯ ಲಾಕರ್‌ದಲ್ಲಿದ್ದ ರೋಖ ಹಣ 6,47,096 ರೂಪಾಯಿ ಹಣವನ್ನು ಕಳ್ಳತನ ಮಾಡಿರುತ್ತಾರೆ ಅಂತಾ ದೂರು ನೀಡಿದ್ದು, ಇದಕ್ಕೆ ಸಂಬಂಧಪಟ್ಟಂತೆ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕಣದ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

WhatsApp Group Join Now
Telegram Group Join Now

ಸದರ ಪ್ರಕರಣದಲ್ಲಿ ಆರೋಪಿತನ ಪತ್ತೆ ಕುರಿತು ಎಸ್. ಪಿ. ಸಾಹೇಬರು ಬೆಳಗಾವಿ ಮತ್ತು ಹೆಚ್ಚುವರಿ ಎಸ್‌. ಪಿ. ಸಾಹೇಬರು ಬೆಳಗಾವಿ ಮತ್ತು ಮಾನ್ಯ ಪೊಲೀಸ್ ಉಪಾಧೀಕ್ಷಕರು ಚಿಕ್ಕೋಡಿರವರ ಮಾರ್ಗದರ್ಶನದಲ್ಲಿ ಶ್ರೀ ಆರ್.ಆರ್.ಪಾಟೀಲ ಸಿ.ಪಿ.ಐ ಚಿಕ್ಕೋಡಿರವರು ಶ್ರೀ ಯಮನಪ್ಪ ಮಾಂಗ, ಪಿ.ಎಸ್.ಚಿಕ್ಕೋಡಿ, ಪ್ರವೀಣ ಬೀಳಗಿ ಪಿಎಸ್‌ಐ (ಅಪರಾಧ ವಿಭಾಗ) ಹಾಗೂ ಸಿಬ್ಬಂದಿ ಜನರಾದ ಆರ್. ಎಲ್. ಶೀಳನವರ, ಎಮ್. ಪಿ. ಸತ್ತಿಗೇರಿ, ಎಸ್. ಪಿ. ಗಲಗಲಿ, ಎಸ್. ಜೆ. ಬಡಿಗೇರ, ಸಂತೋಷ ಬಡೋದೆ, ಕುಮಾರ ಇಳಗೇರ ರವರು ತನಿಖೆ ಕೈಕೊಂಡು, ಆರೋಪಿತರಾದ ಎ-1 ರಮೇಶ ಕುಟ್ಟಪ್ಪ ನಾಯಿಕ ವಯಸ್ಸು-29 ವರ್ಷ ಸಾ|| ಜಗದಾಳ ತಾ|| ರಬಕವಿ-ಬನಹಟ್ಟಿ, ಎ-2 ಬಸವರಾಜ ಉಮೇಶ ಕುಂಚನೂರ ವಯಸ್ಸು-28 ವರ್ಷ ಸಾ|| ಮುತ್ತೂರ ತಾ|| ಜಮಖಂಡಿ, ಎ-3 ಪರಶುರಾಮ @ ಪರಸಪ್ಪ ತಾಯಿ ಸತ್ತೆವ್ವಾ ಅಮ್ಮಾಜಿಗೋಳ ವಯಸ್ಸು-27 ವರ್ಷ ಮತ್ತು ಎ-4 ತುಕ್ಕಪ್ಪ ದುಂಡಪ್ಪ ಅಮ್ಮಾಜಿಗೋಳ ವಯಸ್ಸು-26 ವರ್ಷ ಸಾ|| ಇಬ್ಬರೂ ನಾವಲಗಿ ತಾ|| ರಬಕವಿ-ಬನಹಟ್ಟಿ ಇವರಿಗೆ ದಿನಾಂಕ: 14-10-2022 ರಂದು ಬಂಧಿಸಿ, ಅವರಿಂದ ಕೃತ್ಯಕ್ಕೆ ಉಪಯೋಗಿಸಿದ ಎರಡು ಮೋಟಾರ್ ಸೈಕಲ್‌ಗಳು, 5 ಮೊಬೈಲ್‌ಗಳು, 45 ಗ್ರಾಂ ಬಂಗಾರದ ಆಭರಣಗಳು ಮತ್ತು 2 ಲಕ್ಷ 80 ಸಾವಿರ ಕಳ್ಳತನ ಮಾಡಿದ ಹಣ ವಶಪಡಿಸಿಕೊಳ್ಳಲಾಗಿದೆ. ಸದರಿ ಆರೋಪಿತರು ಇದೇ ತರಹ ಜಮಖಂಡಿ ಪಟ್ಟಣದಲ್ಲಿರುವ ಫಿನ್ ಕೇರ್ ಸ್ಮಾಲ್ ಪೈನಾನ್ ಬ್ಯಾಂಕನ್ನು ಸಹ ಕಳ್ಳತನ ಮಾಡಿರುತ್ತಾರೆ. ಇನ್ನೂ ಮುಂದೆಯು ಸಹ ಗ್ರಾಮ ಶಕ್ತಿ ಪೈನಾನ್ದ ಮುಧೋಳ ಮತ್ತು ಮೂಡಲಗಿ ಪಟ್ಟಣದಲ್ಲಿರುವ ಫಿನ್ ಕೇರ್ ಸ್ಮಾಲ್ ಪೈನಾನ್ಸ ಬ್ಯಾಂಕನ್ನು ಕಳ್ಳತನ ಮಾಡುವ ಯೋಜನೆ ಹೊಂದಿದ್ದರು ಅಂತಾ ತನಿಖೆಯಿಂದ ತಿಳಿದು ಬಂದಿದೆ. ತನಿಖೆ ಮುಂದುವರೆದಿದೆ. ಸದರಿ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

ವರದಿ ಬ್ರಹ್ಮಾನಂದ ಪತ್ತಾರ

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಸಿಸಿಬಿ ಪೊಲೀಸರ ಕಾರ್ಯಾಚರಣೆ – ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಅಂದರ್!

ಮಂಗಳೂರು:- ಜಿಲ್ಲೆಯಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದಕ್ಷಿಣ ಕನ್ನಡ...

ಚಿಕ್ಕೋಡಿ ಮತ್ತು ಬೆಳಗಾವಿಯಲ್ಲಿ ಗೆಲುವು ನಿಶ್ಚಿತ: ಬಿ.ಎಸ್. ಯಡಿಯೂರಪ್ಪ ವಿಶ್ವಾಸ

ಬೆಳಗಾವಿ: ಅತ್ಯಂತ ಸುಳ್ಳು ಹೇಳುವ ಪ್ರಧಾನಿ ಮೋದಿ ಎಂಬ ಸಿಎಂ ಸಿದ್ದರಾಮಯ್ಯ ಟೀಕೆ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಬಿಜೆಪಿ...

ಪಬ್ಲಿಕ್ ನಲ್ಲೇ ರೂಂ ಗೆ ಬೇಗ ಬಾ ಎಂದು ಪತ್ನಿಗೆ ಆರ್ಡರ್ ಮಾಡಿದ ಕ್ರಿಕೆಟರ್ ಜಡೇಜಾ!

ಸಿಎಸ್ ಕೆ ಆಲ್ ರೌಂಡರ್ ರವೀಂದ್ರ ಜಡೇಜಾ ಸೋಷಿಯಲ್ ಮೀಡಿಯಾ ಕಾಮೆಂಟ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ. ರವೀಂದ್ರ ಜಡೇಜಾ...

ಸಮಯ ಬಂದಾಗ ನಾನು ಸುಮಲತಾ ಜೊತೆ ಮಾತಾಡ್ತೀನಿ: HD ಕುಮಾರಸ್ವಾಮಿ!

ಬೆಂಗಳೂರು: ಸುಮಲತಾ ನನಗೆ ಶತ್ರು ಅಲ್ಲ ಎಂದು ಮಾಜಿ ಸಚಿವ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಜೆ.ಪಿ.ನಗರದಲ್ಲಿ...
error: Content is protected !!