ವಿವೇಕವಾರ್ತೆ : ಈಗಿನ ಆಧುನಿಕ ಯುಗದಲ್ಲಿ ಮಕ್ಕಳು ತುಂಬಾನೇ ಚೂಟಿಯಾಗಿರುತ್ತವೆ ಅವರಿಗೆ ಸಾಕಷ್ಟು ವಿಷಯ ತಿಳಿದಿರುತ್ತದೆ ಪ್ರತಿಯೊಂದನ್ನು ಮೊಬೈಲ್ ಮೂಲಕ ತಿಳಿದುಕೊಳ್ತಾರೆ ಆದರೆ ಅದರ ಸುರಕ್ಷತೆಯ ಬಗ್ಗೆ ಗಮನ ಕೊಡುವುದಿಲ್ಲ ,ಅದೇ ರೀತಿ ಶಾಲಾ ಕಾಲೇಜು ಮಕ್ಕಳು ಮಾಧಕ ವ್ಯಸನಿಗಳಿಗೆ ಬಲಿಯಾಗುತ್ತಿದ್ದಾರೆ.
ಅದಕ್ಕಾಗಿ ಮಕ್ಕಳನ್ನು ಜಾಗೃತಗೊಳಿಸಲು ಪೋಲಿಸರ ತಂಡ ಹುಬ್ಬಳ್ಳಿ ಧಾರವಾಡ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದರು.
ಡೈಲಿ ಕೆಲಸದ ನಡುವೆ ಸ್ವಲ್ಪ ಟೈಂ ಮಾಡಕೊಂಡ ನಮ್ಮ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ಘಟಕದ ವ್ಯಾಪ್ತಿಯಲ್ಲಿ ಬರುವ ಶಾಲಾ ಕಾಲೇಜುಗಳಿಗೆ ಆಯಾ ಠಾಣೆಯ ಪಿ ಐ ನೇತೃತ್ವದ ತಂಡಗಳು ಭೇಟಿ ನೀಡಿ ‘ಸೈಬರ್ ಅಪರಾಧ, ಸಾಮಾಜಿಕ ಜಾಲತಾಣ ಸುರಕ್ಷತೆ, ಡ್ರಗ್ಸ್ ವ್ಯಸನ ಸಂಚಾರ ನಿಯಮಗಳ ಬಗ್ಗೆ ರಸ್ತೆ ಸುರಕ್ಷತೆ ಕಾನೂನು ಸುವ್ಯವಸ್ಥೆ ERSS 112’ ಮುಂತಾದ ವಿಷಯಗಳ ಕುರಿತು ತಿಳುವಳಿಕೆ ಹೇಳಿ, ಮಕ್ಕಳೊಂದಿಗೆ ಸಂವಹನ ನಡೆಸುವ ಮೂಲಕ ಜಾಗೃತಿ ಮೂಡಿಸಿದರು.