ವಿವೇಕವಾರ್ತೆ : ಪವಿತ್ರ ಕ್ಷೇತ್ರವಾದ ಮಾಸ್ತಿಮನೆಯ ದೇವಿಮನೆ ಘಟ್ಟದಲ್ಲಿ ಒಂದು ಅನಾಥ ಶವ ಪತ್ತೆಯಾಗಿತ್ತು. ಆದ್ರೆ ಶವ ನೋಡಿದ ಪೊಲೀಸರಿಗೆ ಅದೊಂದು ಕೊಲೆ ಎಂದು ಸಂಶಯ ಪಟ್ಟಿದ್ದಾರೆ. ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಶವವನ್ನು ಈ ಪವಿತ್ರ ಕ್ಷೇತ್ರದಲ್ಲಿ ತಂದು ಎಸೆದು ಹೋಗಿದ್ದಾರೆ ಅಂತ ಗೊತ್ತಾಗಿದೆ.
ಈ ಹಿನ್ನಲೆಯಲ್ಲಿ ಶವ ಪರೀಕ್ಷಿಸುವ ವೇಳೆ ಸತ್ತವನ ಜೇಬಿನಲ್ಲಿ ಬಸ್ ಟಿಕೇಟ್ ಒಂದು ಪತ್ತೆಯಾಗಿದೆ. ಅದೇ ಟಿಕೆಟ್ ಕೊಲೆಯಾದವನ ಪೂರ್ವಪರ ಹೇಳಿದೆ. ಅಷ್ಟೆ ಅಲ್ಲಾ ಆ ಟಿಕೆಟ್ ಪೊಲೀಸರು ಕೊಲೆಗಾರನ ಮನೆಗೆ ಬಂದು ನಿಲ್ಲುವಂತೆ ಮಾಡಿದೆ. ಶವದ ಜೇಬಿನಲ್ಲಿ ಸಿಕ್ಕ ಟಿಕೆಟ್ ಕೊಲೆಗಾರನನ್ನ ಜೈಲಿಗೆ ಕಳಿಸುವಂತೆಯೂ ಮಾಡಿದೆ.
ಇನ್ನು ಕೊಲೆಯಾದ ವ್ಯಕ್ತಿಯನ್ನು ಬಶೀರ್ ಎಂದು ಪೊಲೀಸರು ಗುರುತಿಸಿದ್ದು, ಕೊಲೆಗಾರ ಮತ್ಯಾರು ಅಲ್ಲಾ ಜೊತೆಯಲ್ಲಿ ಪ್ರಯಾಣಿಸಿದ್ದ ಸ್ನೇಹಿತನಾದ ಪರಶುರಾಮ.
ಕೊಲೆ ನಡೆದಿರುವುದಾರೂ ಯಾಕೆ.?
ಪ್ರಿಯಕರನಿಗಾಗಿ ಗಂಡನನ್ನ ಮುಗಿಸಲು ಪ್ಲಾನ್ ಮಾಡಿದ್ದೆ, ಬಶೀರನ ಪತ್ನಿ ರಾಜ್ಮಾ. ಪತಿಯನ್ನು ಮುಗಿಸಲು ಪರಶುರಾಮನ ಜೊತೆ ಕೂತು ಒಂದು ಸ್ಕೆಚ್ ರೆಡಿ ಮಾಡ್ತಾಳೆ. ಪ್ಲಾನ್ ರೆಡಿಯಾದ ಪರಿಣಾಮ ಪ್ರಿಯಕರನಿಗೆ 10 ಸಾವಿರ ಕೊಟ್ಟು ಗಂಡನನ್ನ ಮುಗಿಸಿ ಬಾ ಅಂತ ಕಳುಹಿಸುತ್ತಾಳೆ.
ಇನ್ನೂ ಸ್ನೇ ರಾಜ್ಮಾ ಹೇಳಿದಂತೆ ಸ್ನೇಹಿತನ ಮುಗಿಸಲು ನಿರ್ಧರಿಸೋ ಪರಶುರಾಮ ಬಶೀರ್,ಗೆ ಕರೆ ಮಾಡಿ ಮಂಗಳೂರಿಗೆ ಹೋಗಿ ಮಜಾ ಮಾಡಿ ಬರೋಣ ಬಾ ಅಂತ ಕರೆಯುತ್ತಾನೆ. ಸ್ನೇಹಿತ ಕರೆದಿದ್ದಾನೆ ಎಂದು ಬಶೀರ ಅವನ ಜೊತೆ ಬಸ್ ಹತ್ತೇಬಿಡ್ತಾನೆ.
ಮರಳಿ ಬರುವಾಗ ಎಣ್ಣೆ ಪಾರ್ಟಿ ಮಾಡೋಣ ಅಂತ ಹೇಳಿ ದೇವಿಮನೆ ಘಟ್ಟಕ್ಕೆ ಕರೆದ್ದೊಯ್ದು ಬಶೀರನಿಗೆ ಚೆನ್ನಾಗಿ ಕುಡಿಸಿ ಅಲ್ಲಿಯೇ ಆತನ ಕಥೆ ಮುಗಿಸುತ್ತಾನೆ.