Sunday, October 1, 2023

ಮದ್ಯ’ರಾತ್ರಿ ಸ್ನೇಹಿತನ ಪ್ರಾಣಕ್ಕೆ ಕುತ್ತು! ನಂಬಿ ಜೊತೆಯಲ್ಲಿ ಹೋದವನೇ ಫಿನಿಶ್‌

ವಿವೇಕವಾರ್ತೆ: ಆತ ಫುಲ್ ಟೈಟಾಗಿ ತಡ ರಾತ್ರಿ (Night) ಮನೆಗೆ (Home) ಬಂದಿದ್ದ. ರಾತ್ರಿ ಪೂರ್ತಿ ನಿದ್ದೆ ಮಾಡಿ ಬೆಳಗ್ಗೆ ಸ್ನಾನ ಮಾಡಿ ಶಿಸ್ತಾಗಿ ರೆಡಿಯಾಗಿದ್ದ.ಆದರೆ ರಾತ್ರಿ ಏನಾಯ್ತ್ ಅಂತಾ ನೆನಪ್ ಮಾಡ್ಕೊಂಡೋನಿಗೆ ಶಾಕ್ (Shock) ಆಗಿತ್ತು. ಆ ದೃಶ್ಯ ಕಣ್ಣು ಮುಂದೆ ಬರುತ್ತಿದ್ದಂತೆ ಸೀದಾ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಅಷ್ಟಕ್ಕೂ ರಾತ್ರಿ ಅಲ್ಲೇನಾಗಿತ್ತು? ನಾವು ಹೇಳ್ತೀವಿ . ಹೌದು, ಸ್ನೇಹ (Friendship) ಅಂದ್ರೆ ಪ್ರಾಣ, ಸ್ನೇಹ ಅಂದ್ರೆ ಉತ್ಸಾಹ. ಸ್ನೇಹ ಅಂದ್ರೆ ಪ್ರೀತಿ (Love), ವಿಶ್ವಾಸ. ಆದರೆ ಸ್ನೇಹತ್ವವೇ ರಾಕ್ಷಸನಾದಾಗ ಯಾರನ್ನ ನಂಬೋದು. ಇಲ್ಲಿ ಆಗಿರೋದೂ ಕೂಡ ಅದೇ. ನಂಬಿ ಜತೆಯಲ್ಲಿ ಹೋದವನ ಪ್ರಾಣವನ್ನೇ ತೆಗೆದಿದ್ದಾನೆ ಈ ದುಷ್ಟ.

ಕಣ್ಣಿಗೆ ಗಾಗಲ್ ಹಾಕ್ಕೊಂಡು ಕೈಯಲ್ಲಿ ಬೆಕ್ಕಿನ ಮರಿ ಹಿಡಿದುಕೊಂಡು ಪೋಸ್‌ ಕೊಡುತ್ತಿರುವ ಈತನ ಹೆಸರು ಅಮಾನುಲ್ಲ. ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ, ರಾತ್ರಿ ಸ್ನೇಹಿತ ಚೇತನ್‌ನನ್ನ ಜೊತೆಯಲ್ಲಿ ಕರೆದುಕೊಂಡು ಕೆಂಗೇರಿ ಬಳಿಯ ಕೊಮ್ಮಘಟ್ಟ ಬಳಿಯ ಮೈದಾನದತ್ತ ಹೋಗಿದ್ದಾನೆ. ನಂತರ ಇಬ್ಬರೂ ಸೇರಿ ಎಣ್ಣೆ ಹೊಡೆದಿದ್ದಾರೆ. ಈ ವೇಳೆ ಅಮಾನುಲ್ಲನಲ್ಲಿದ್ದ ರಾಕ್ಷಸ ಹೊರ ಬಂದಿದ್ದಾನೆ.

ಕುಡಿದ ಮತ್ತಿನಲ್ಲಿ ಗೆಳೆಯನ ಜೊತೆ ಕಿರಿಕ್ ತೆಗೆದಿದ್ದ ಅಮಾನುಲ್ಲಾ, ಚೇತನ್‌ ತಲೆ ಮೇಲೆ ಕಲ್ಲು ಎತ್ತಿ ಹಾಕೇಬಿಟ್ಟಿದ್ದಾನೆ. ಮೊದಲೇ ಎಣ್ಣೆ ಮತ್ತಿನಲ್ಲಿದ್ದ ಚೇತನ್‌ ಪ್ರತಿರೋದಿಸಲಾಗದೆ ಅಲ್ಲೇ ಪ್ರಾಣ ಬಿಟ್ಟಿದ್ದಾನೆ. ಅಂದಹಾಗೇ, ಈ ಕೇಸ್ ನಲ್ಲಿ ಟ್ವಿಸ್ಟ್ ಏನಂದರೆ ಆರೋಪಿ ಪೊಲೀಸರ ಮುಂದೆ ಕೊಲೆ ಮಾಡಿರುವ ಬಗ್ಗೆ ಹೇಳಿರುವ ವಿಚಾರ. ಚೇತನ್‌ನನ್ನ ಕೊಲೆ ಮಾಡಿದ್ದ ಅಮಾನುಲ್ಲ, ಸೀದಾ ಮನೆಗೆ ಹೋಗಿ ಮಲಗಿದ್ದಾನೆ. ಬೆಳಗ್ಗೆ ಎದ್ದು ನೀಟಾಗಿ ಸ್ನಾನ ಮಾಡಿ ಮನೇಲಿ ಕೂತಿದ್ದವನಿಗೆ ರಾತ್ರಿಯ ಘಟನೆ ನೆನಪಾಗಿ, ಇನ್ನು ನನಗೆ ಉಳಿಗಾಲವಿಲ್ಲ ಅಂತ ಸೀದಾ ಕೆಂಗೇರಿ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಇನ್ನು ಕೊಲೆ ಬಗ್ಗೆ ಬಾಯ್ಬಿಡ್ತಿದ್ದೇ ಆರೋಪಿ ಅಮಾನುಲ್ಲನನ್ನ ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸದ್ಯ ಈ ಕೊಲೆ ಯಾಕೆ ನಡೆದಿದ್ದು ಅನ್ನೋದು ಪ್ರಶ್ನೆಯಾಗಿಯೇ ಉಳಿದಿದೆ. ತನಿಖೆ ನಂತರವೆ ಕೊಲೆಗೆ ಅಸಲಿ ಕಾರಣ ಏನು ಗೊತ್ತಾಗಬೇಕಿದೆ.

RELATED ARTICLES

ಪ್ರೇಮಿಗಳಿಗೆ ರೂಂ ಕೊಟ್ಟು ಖಾಸಗಿ ವೀಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‍ಮೇಲ್ ; ಇಬ್ಬರು ಅಂದರ್..!

ವಿವೇಕವಾರ್ತೆ : ಬೆಂಗಳೂರಿನ ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಕೆಂಚನಾಪುರದಲ್ಲಿರುವ ಹೋಟೆಲ್​ನಲ್ಲಿ ಪ್ರೇಮಿಗಳ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್​ ಮೇಲ್ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಗೋಕಾಕ : ಗುರುವಾರ ಮಧ್ಯರಾತ್ರಿ ಅಮವಾಸ್ಯೆ ಹಿನ್ನೆಲೆ ಮನೆ...

ಗನ್​ ತೋರಿಸಿ ಮಹಿಳಾ ಕಾನ್ಸ್​ಟೇಬಲ್​​​ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ : ಪ್ರಕರಣ ದಾಖಲು

ವಿವೇಕವಾರ್ತೆ : ಮಹಿಳಾ ಪೊಲೀಸ್​ ಪೇದೆ ಮೇಲೆ ಸಹೋದ್ಯೋಗಿಯೇ ಹಲವು ಬಾರಿ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇಲ್ಲಿನ ಸ್ವರ್ಗೇಟ್​ ಪೊಲೀಸ್​ ಕಾಲೋನಿಯನ್ನು ಗನ್​ನಿಂದ ಬೆದರಿಸಿ ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​​​​​...

ಬೆಂಗಳೂರಲ್ಲಿ ‘ಕಾಮುಕ ಟೆಕ್ಕಿ’ ಅಂದರ್ : ಚೆಂದ ಚೆಂದದ ಆಂಟಿಯರೇ ಈತನ ಟಾರ್ಗೆಟ್.!

ವಿವೇಕವಾರ್ತೆ : ಬೆಂಗಳೂರಿನಲ್ಲೊಬ್ಬ ಕಾಮುಕ ಟೆಕ್ಕಿ ಪೊಲೀಸರ ಬಲೆಗೆ ಬಿದ್ದಿದ್ದು, ಈತನ ಕಥೆ ಕೇಳಿದ್ರೆ ನೀವೇ ಶಾಕ್ ಆಗ್ತೀರಾ.ಚೆಂದ ಚೆಂದದ ಫೋಟೋ ಹಾಕುವ ಆಂಟಿಯರಿಗೆ ರಿಕ್ವೆಸ್ಟ್ ಕಳುಹಿಸುತ್ತಿದ್ದ ಕಾಮುಕ ಫೈಜಲ್ ಎಂಬಾತನನ್ನು ಪೊಲೀಸರು...
- Advertisment -

Most Popular

ಭಾರತದಲ್ಲಿ ಈ ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಹೆಚ್ಚು ʻಅಶ್ಲೀಲ ಚಿತ್ರʼ ವೀಕ್ಷಿಸುತ್ತಾರೆ : ತಜ್ಞರಿಂದ ಆತಂಕಕಾರಿ ಮಾಹಿತಿ.!

ವಿವೇಕ ವಾರ್ತೆ : ಭಾರತದಲ್ಲಿ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಪೋರ್ನ್ ವೀಕ್ಷಿಸುತ್ತಿದ್ದಾರೆ. ಚಿಕ್ಕ ಮಕ್ಕಳು ಪೋರ್ನ್ ನೋಡುತ್ತಿದ್ದು, ಅಶ್ಲೀಲತೆಗೆ ಗುರಿಯಾಗುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ. ಪೋರ್ನ್ ಸೈಟ್‌ಗಳನ್ನು ನಿರ್ಬಂಧಿಸುವ ನಿಯಮಗಳ ಹೊರತಾಗಿಯೂ,...

ಬುದ್ದಿಮಾತು ಹೇಳಿದ ಪೋಷಕರು ; ವಿಷ ಕುಡಿದು ಸಾವಿಗೀಡಾದ 19 ರ ಯುವತಿ.!

ವಿವೇಕವಾರ್ತೆ : ಪೋಷಕರು ಬುದ್ಧಿವಾದ ಹೇಳಿದ್ದರಿಂದ ನೊಂದ ಬಿ.ಎ ಪದವಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾರು ಗ್ರಾ.ಪಂ. ವ್ಯಾಪ್ತಿಯ ಹರಾವರಿ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯನ್ನು...

ನೋಡ ನೋಡುತ್ತಿದ್ದಂತೆಯೇ ಹೂವು ನುಂಗುವ ಗಣೇಶ ಮೂರ್ತಿ ; ಅಚ್ಚರಿಯ ವಿಡಿಯೋ ವೈರಲ್.!

ವಿವೇಕವಾರ್ತೆ : ಗಣೇಶನ ಮೂರ್ತಿ ಹಾಲು ಕುಡಿಯೋದನ್ನ ಕೇಳಿದ್ದೇನೆ, ನೀರು ಕುಡಿಯೋದನ್ನು ಕೇಳಿದ್ದೇವೆ. ಆದರೆ ಇಲ್ಲೋಬ್ಬ ಗಣೇಶ ತನಗೆ ಇಡಿಸಿದ ಹೂವನ್ನೇ ನುಂಗುತ್ತಿದ್ದಾನೆ. ಹೌದು, ಇಂಥದೊಂದು ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಲೋಕಾಯುಕ್ತ ಬಲೆಗೆ ಬಿದ್ದ BBMP ಸಹಾಯಕ ಕಂದಾಯ ಅಧಿಕಾರಿ.!

ವಿವೇಕವಾರ್ತೆ : ಬಿಬಿಎಂಪಿಯ ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿಯ ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿಯ ಸಹಾಯಕ ಕಂದಾಯ ಅಧಿಕಾರಿ ಚಂದ್ರಪ್ಪ ಬೀರಜ್ಜನವರ್ ಮತ್ತು ಗೋಪಾಲ್...
error: Content is protected !!