ತನ್ನ ಗೆಳೆಯನನ್ನು ರಕ್ಷಿಸಲು ದೈತ್ಯ ಹೆಬ್ಬಾವಿನ ಜೊತೆ ನರಿ ಭೀಕರ ಹೋರಾಟ : ರೋಚಕ ವಿಡಿಯೋ ವೈರಲ್.!

Published on

spot_img
spot_img

ವಿವೇಕವಾರ್ತೆ : ಪ್ರಾಣಿಗಳ ಕುರಿತು ಈಗಾಗಲೇ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವುಗಳಲ್ಲಿ ಅನೇಕ ವಿಡಿಯೋಗಳು ಸಂಚಲನವನ್ನೇ ಉಂಟುಮಾಡಿವೆ. ಇನ್ನು ಕೆಲವು ವಿಡಿಯೋಗಳು ಭಾವನಾತ್ಮಕವಾಗಿ ನಮ್ಮನ್ನು ಮತ್ತೊಂದು ಲೋಕಕ್ಕೆ ಕರೆದ್ದೊಯ್ಯೂತ್ತವೆ

ಸಾಮಾಜಿಕ ಜಾಲತಾಣದಲ್ಲಿ ಸದ್ಯ ನರಿ ಮತ್ತು ಹೆಬ್ಬಾವಿನ ವಿಡಿಯೋ ಒಂದು ನೆಟ್ಟಿಗರಿಗೆ ಬಾಯ್ತೆರೆದು ನೋಡುವಂತೆ ಮಾಡಿದೆ.

ವೈರಲ್ ಆಗಿರೋ ಆ ವಿಡಿಯೋದಲ್ಲಿ ಗುಜರಾತಿನ ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ ನರಿ ಮತ್ತು ಹೆಬ್ಬಾವಿನ ನಡುವೆ ನಡೆದ ಭೀಕರ ಕಾಳಗದ ವಿಡಿಯೋ ಇದೀಗ ಸಾಕಷ್ಟು ಶೇರ್ ಆಗುತ್ತಿದೆ.

ವಿಡಿಯೋದಲ್ಲಿ ದೈತ್ಯ ಹೆಬ್ಬಾವಿನ ಬಿಗಿ ಹಿಡಿತದಿಂದ ಹೇಗಾದರು ಮಾಡಿ ತನ್ನ ಗೆಳೆಯನ್ನು ಕಾಪಾಡಬೇಕು ಎನ್ನುವ ನರಿಯ ಹಠ ನೋಡುಗರ ಎದೆ ಝಲ್‌ ಎನಿಸುವಂತಿದೆ. ಹೆಬ್ಬಾವು ನರಿಯ ಉಗ್ರ ದಾಳಿಗೆ ಪ್ರತಿಯಾಗಿ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿತು. ಅಪಾಯದ ನಡುವೆಯೂ ತನ್ನ ಗೆಳೆಯನನ್ನು ಬಿಟ್ಟು ಹಿಂದೆ ಸರಿಯಲಿಲ್ಲ. ಅದೃಷ್ಟವಶಾತ್, ಕೊನೆಯಲ್ಲಿ, ಹೆಬ್ಬಾವು ನರಿಯಿಂದ ತಪ್ಪಿಸಿಕೊಳ್ಳುತ್ತದೆ, ನರಿ ರೋಚಕ ಯುದ್ಧದಲ್ಲಿ ಗೆಲ್ಲುತ್ತದೆ.

KalingaTV24X7 ಎಂಬ ಇನ್ಸ್ಟ್ರಾಂಮ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಇನ್ನು, ”ಕ್ಯಾಮರಾದಲ್ಲಿ ಸೆರೆಹಿಡಿದ ಹೃದಯವನ್ನು ನಿಲ್ಲಿಸುವ ದೃಶ್ಯದಲ್ಲಿ, ಧೈರ್ಯಶಾಲಿ ನರಿಯೊಂದು ಗಿರ್ ಅರಣ್ಯದಲ್ಲಿ ಹೆಬ್ಬಾವಿನ ವಿರುದ್ಧ ವೀರಾವೇಶದಿಂದ ಹೋರಾಡುತ್ತಿರುವಾಗ ಗಮನಾರ್ಹವಾದ ಶೌರ್ಯವನ್ನು ಪ್ರದರ್ಶಿಸಿತು. ಹೆಬ್ಬಾವಿನ ಪ್ರಬಲ ಹಿಡಿತಕ್ಕೆ ಬಲಿಯಾದ ತನ್ನ ಸಹಚರನನ್ನು ರಕ್ಷಿಸಲು ನರಿ ಹತಾಶವಾಗಿ ಹೋರಾಡಿದ ಘಟನೆ ಬಯಲಾಯಿತು”. ಎಂದು ಬರೆದುಕೊಂಡಿದ್ದಾರೆ.

https://www.instagram.com/reel/CwCfLW2AzAq/?utm_source=ig_web_copy_link

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!