Tuesday, September 26, 2023

ಗೃಹ ರಕ್ಷಕ ದಳ ಇಲಾಖೆಯ ಗುಂಪುಗಾರಿಕೆಗೆ ಕಡಿವಾಣ ಎಂದು..!?

ಬೆಳಗಾವಿ: ಗೃಹ ರಕ್ಷಕ ದಳ ಇಲಾಖೆಯ ಗುಂಪುಗಾರಿಕೆಗೆ ಕಡಿವಾಣ ಎಂದೂ ? ಜಿಲ್ಲಾ ಗೃಹ ರಕ್ಷಕ ದಳದ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಸ್ವಂತ ಖರ್ಚಿನಿಂದ ಸಾಕಷ್ಟು ಬದಲಾವಣೆ ತಂದಿದ್ದರೂ ಕಿರಣ್ ನಾಯ್ಕ ಅವರಿಗೆ ಕೆಲವರು ಗುಂಪುಗಾರಿಕೆ ಮಾಡಿ ರಾಜಕೀಯ ಮಾಡುತ್ತಿರುವುದು ನಿಷ್ಠಾವಂತ ಹೋಮ್ ಗಾಡ್೯ಗಳ ಕೆಂಗಣ್ಣಿಗೆ ಗುರಿಯಾಗಿದೆ.

ಹೌದು. ಬೆಳಗಾವಿ ಜಿಲ್ಲಾ ಗೃಹ ರಕ್ಷಕ ದಳದ ಇಲಾಖೆಯ ಬಗ್ಗೆ ವಿನಾಕಾರಣ ಸುಳ್ಳು ಅರ್ಜಿ ನೀಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡಂಟ್ ಕಿರಣ ನಾಯ್ಕ ಆರಕ್ಷಕ ದಳದ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕ ಗೃಹ ರಕ್ಷಕದಳ ಸಂಸ್ಥೆಯಲ್ಲಿ ಗೃಹ ರಕ್ಷಕರು ನಿಷ್ಕಾಮ ಸೇವಕರಾಗಿರುತ್ತಾರೆ. ಗೃಹ ರಕ್ಷಕರು ಸರಕಾರದಿಂದ ವೇತನ ಪಡೆಯುವ ಖಾಯಂ ಸಿಬ್ಬಂದಿಗಳಾಗಿರುವುದಿಲ್ಲ. ಕೇವಲ ತುರ್ತು ಸಮಯದಲ್ಲಿ ಬಂದೋಬಸ್ತ ಕರ್ತವ್ಯಗಳಿರುವಾಗ ಮಾತ್ರ ಗೌರವ ಧನ ಎಂದು ಪಡೆಯುತ್ತಾರೆ. ಆದ್ದರಿಂದ ಗೃಹ ರಕ್ಷಕ‌ದಳ ಸದಸ್ಯತ್ವ ಹೊಂದಿದ ಮಾತ್ರಕ್ಕೆ ಯಾವುದೇ ರೀತಿ ಜೀವನ ಆಧಾರ ಇರುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಗೃಹ ರಕ್ಷಕ ದಳ ಒಂದು ಇಷ್ಕಾಮ ಸೇವೆಯಾಗಿದ್ದು, ಈ ಸಂಸ್ಥೆಯಲ್ಲಿ ಅವರ ವೃತ್ತಿ ಜೀವನದ ಜತೆಗೆ ಸಮಾಜ ಸೇವೆ ಮಾಡ ಬಯಸುವವರಿಗೆ ಮಾತ್ರ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಗೃಹ ರಕ್ಷಕ‌ ಸೇವಾ ಅವಧಿಯು ಪ್ರತಿ ಮೂರು ವರ್ಷಕ್ಕೊಮ್ಮೆ ನವೀಕರಣ ಪ್ರಕ್ರಿಯೆ ಮಾಡಬೇಕಾಗಿರುತ್ತದೆ. ಕಳೆದ 15 ವರ್ಷಗಳಿಂದ ನವೀಕರಣ ಮಾಡಿಲ್ಲ ಎಂದು ಕಮಾಂಡಂಟ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ವಿಷಯದ ಕುರಿತು ಇಲಾಖೆಯಲ್ಲಿನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ನಿಮ್ಮ ಆದೇಶದ ಮೇರೆಗೆ ಹಾಗೂ ಘಟಕಾಧಿಕಾರಿಗಳಿಂದ ಅರ್ಜಿಗಳನ್ನು ಸ್ವೀಕರಿಸಿ ಅವರ ಶಿಫಾರಸ್ಸು ಹಾಗೂ ಕಚೇರಿಯ ಬೋಧಕರ ಪರಿಶೀಲನೆಗೆ ನವೀಕರಣ ಮಾಡಲಾಗಿದೆ. ಆದರೂ ಕೆಲ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೆಳಗಾವಿ ಗೃಹ ರಕ್ಷಕ ದಳದ ಘಟಕಾಧಿಕಾರಿಗಳು ಅವರ ವೈಯಕ್ತಿಕ ಸ್ವಾರ್ಥಕ್ಕಾಗಿ ಮತ್ತು ಅವರ ಕರ್ತವ್ಯದ ಲೋಪದೋಷವನ್ನು ಮರೆ ಮಾಚುವ ದುರುದ್ದೇಶದಿಂದ ಗೃಹ ರಕ್ಷಕರನ್ನು ಪ್ರಚೋದಿಸಿ ಮಾನಸಿಕವಾಗಿ ನಮಗೆ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ಆರಕ್ಷಕ ದಳದ ಮಹಾ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಕಿರಣ್ ಆರೋಪಿಸಿದ್ದಾರೆ.ಗೃಹ ರಕ್ಷಕ ದಳ ಸಮವಸ್ತ್ರಧಾರಿ ಇಲಾಖೆಯಾಗಿದ್ದು, ಇಲ್ಲಿ ಎಲ್ಲ ಕರ್ತವ್ಯಗಳು ಸರಕಾರದ ನಿಯಮಾನುಸಾರ ಹಾಗೂ ಕಾನೂನು ಬದ್ಧವಾಗಿ ನಡೆಯುತ್ತವೆ. ಸಮಾಲೋಪನೆಗೊಂಡ ಗೃಹ ರಕ್ಷಕರು ಮಾಧ್ಯಮ, ಚುನಾಯಿತ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಬಳಿ ಸುಳ್ಳು ದೂರು ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಈ‌ ಹಿಂದಿನ ಘಟಕಾಧಿಕಾರಿಗಳಾದ ಬಸವರಾಜ ಹಂಡಗಿ, ಸಂಜಯ ನಿಂಬಾಳ್ಕರ್, ಮಹಾಂತೇಶ ಕಿತ್ತೂರ ಸೇರಿದಂತೆ ಇನ್ನಿತರರು ಸಮಾಲೋಪನೆಗೊಂಡ ಗೃಹ ರಕ್ಷಕರು ಗುಂಪುಗಾರಿಕೆ ಮಾಡಿ ಇಲಾಖೆಗೆ ಕಪ್ಪು ಚುಕ್ಕೆ ಬರುವಂತೆ ಮಾಡಿರುತ್ತಾರೆ ಎಂಬ ಮಾಹಿತಿ ಬಂದಿರುವುದರಿಂದ ಇವರ ಮೇಲೆ‌ ತನಿಖೆ ಪ್ರಕ್ರಿಯೆಯಲ್ಲಿದೆ ಎಂದು ನೀಡಲಾದ ದೂರಿನ ಪತ್ರದಲ್ಲಿ ತಿಳಿಸಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ, ಗಣ್ಯ ವ್ಯಕ್ತಿಗಳು ಜಿಲ್ಲೆಗೆ ಭೇಟಿ‌ ನೀಡುವ ಸಂದರ್ಭದಲ್ಲಿ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಗೃಹಮಂತ್ರಿ, ಚುನಾವಣಾ ಆಯೋಗ ಸೇರಿದಂತೆ ಎಲ್ಲ‌ ಹಿರಿಯ ಅಧಿಕಾರಿಗಳಿಗೆ ಸುಳ್ಳು ದೂರು‌ ನೀಡಿ ಮಾನಸಿಕವಾಗಿ ಚಿತ್ರ ಹಿಂಸೆ ನೀಡುತ್ತಿದ್ದಾರೆ. ಈ‌ ಹಿಂದೆಯೂ ಕಮಾಂಡಂಟ್ ಹಾಗೂ ಪ್ರಭಾರ ಕಮಾಂಡಂಟ್ ಆಗಿ ಕಾರ್ಯ ನಿರ್ವಹಿಸಿದ ಹೆಚ್ಚುವರಿ ಅಧೀಕ್ಷಕರಿಗೂ ಇದೇ ರೀತಿ ಕಿರುಕುಳ ನೀಡಿದ್ದಾರೆ. ಆದ್ದರಿಂದ ಇಂಥ ಸುಳ್ಳು ದೂರುಗಳನ್ನು ನೀಡಿದಾಗ ಕೂಲಂಕಷವಾಗಿ ಪರಿಶೀಲಿಸಿ ನಮ್ಮಂಥ ಅಧಿಕಾರಿಗಳಿಗೆ ನ್ಯಾಯ ದೊರಕಿಸಿ ಕೊಟ್ಟು ಕಿರುಕುಳ ನೀಡುವವರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಪತ್ರದಲ್ಲಿ ಕಿರಣ ನಾಯ್ಕ ಮನವಿ ಮಾಡಿದ್ದಾರೆ.

ವರದಿ- ಬ್ರಹ್ಮಾನಂದ ಪತ್ತಾರ

RELATED ARTICLES

ಸಹಾಯಕ ಸರಕಾರಿ ವಕೀಲರಾಗಿ ಆಯ್ಕೆಯಾದ ಮಹಾವೀರ ಗಂಡವ್ವಗೋಳ ಅವರಿಗೆ ಕನ್ನಡ ಸೇನೆಯಿಂದ ಸತ್ಕಾರ

ವಿವೇಕವಾರ್ತೆ :ಕರ್ನಾಟಕ ಸರ್ಕಾರದ ಅಭಿಯೋಜನೆಯ ಇಲಾಖೆಯಲ್ಲಿ ಸಹಾಯಕ ಸರಕಾರಿ ಅಭಿಯೋಜನೆಕಾರರು-ವ- ಸಹಾಯಕ ಸರಕಾರಿ ವಕೀಲರು (APP) ಆಯ್ಕೆ ಆಗಿ ಬೆಳಗಾವಿ ಜಿಲ್ಲೆಯ ನ್ಯಾಯಾಲಯದಲ್ಲಿ ಅಭಿಯೋಜನೆಕಾರರಾಗಿ ಆಯ್ಕೆಯಾದ ಮಹಾವೀರ ಗಂಡವ್ವಗೋಳ ಅವರಿಗೆ ಕನ್ನಡ ಸೇನೆ...

ಬೆಳಗಾವಿ : ಲಾಡ್ಜ್​​ನಲ್ಲಿ ವೈಶ್ಯಾವಾಟಿಕೆ ದಂಧೆ ; ಇಬ್ಬರು ಯುವತಿಯರ ರಕ್ಷಣೆ.!

ವಿವೇಕವಾರ್ತೆ : ಜಿಲ್ಲೆಯ  ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಇಬ್ಬರು ಯುವತಿಯರನ್ನು ರಕ್ಷಣೆ ಮಾಡಲಾಗಿದೆಂದು ಮಾಹಿತಿ ಲಭ್ಯವಾಗಿದೆ. ಕುಡಚಿ ಪಟ್ಟಣದ ಲಾಡ್ಜ್ ಒಂದರಲ್ಲಿ...

ಸುವರ್ಣ ವಿಧಾನಸೌಧ ಬಳಿ ಮಗುಚಿದ ರಾಜ್ಯ ಸಾರಿಗೆ ಬಸ್..!

ವಿವೇಕವಾರ್ತೆ : ಬೆಳಗಾವಿ-ಕೆ.ಕೆ.ಕೊಪ್ಪ ನಡುವೆ ಸಂಚರಿಸುವ ಬಸ್ ಸುವರ್ಣ ವಿಧಾನಸೌಧದ ಬಳಿ ರಸ್ತೆ ಪಕ್ಕ ಮಗುಚಿದ ಪರಿಣಾಮ ಬಸ್ಸಿನಲ್ಲಿದ್ದವರು ಗಾಯಗೊಂಡಿದ್ದಾರೆ. ದುರದೃಷ್ಟವಶಾತ್ ಬಸ್ಸಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇರಲಿಲ್ಲ. ಜೊತೆಗೆ ತುಸು ವಾಲಿದೆ. ಪೂರ್ಣ...
- Advertisment -

Most Popular

ಬ್ಯಾಕ್ ಪ್ಲಿಪ್ ಮಾಡಲು ಹೋಗಿ ಫೇಲ್ ಆದ ಯುವಕ : ‘ಇದರ ಅಗತ್ಯ ಇತ್ತೇ’ ಎಂದ ನೆಟ್ಟಿಗರು ; ವಿಡಿಯೋ ವೈರಲ್.!

ವಿವೇಕವಾರ್ತೆ : ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಕೆಲ ಯುವಕ ಯುವತಿಯರ ಹುಚ್ಚಾಟದ ವಿಡಿಯೋಗಳು ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರೈಲಿನ ಬೋಗಿಯೊಳಗೆ ವಿಡಿಯೋ ಚಿತ್ರೀಕರಣದ ನಿಷೇಧದ ಹೊರಾತಗಿಯೂ ಇಂಥ ಪ್ರವೃತ್ತಿಗಳು ಮುಂದುವರೆಯುತಲೇ ಇವೆ. ಆ...

ಕಾರಿಗೆ ಡಿಕ್ಕಿ ಹೊಡೆದ ಲಾರಿ : ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವು..!

ವಿವೇಕವಾರ್ತೆ : ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿ ಕಾರಿಗೆ ಲಾರಿ ಡಿಕ್ಕಿಯಾದ ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾದ ನಡೆದಿದೆ. ಮೃತ ದುರ್ದೈವಿಗಳನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆಕಾಶ್ (20), ಹೇಮಂತ್ (28)...

ಕುಂಬಳಕಾಯಿ ಬೀಜ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು.!

ವಿವೇಕವಾರ್ತೆ : ಕುಂಬಳಕಾಯಿ ಬೀಜಗಳು ತುಂಬಾ ಚಿಕ್ಕದಾಗಿದ್ದರೂ, ನಮ್ಮ ವ್ಯವಸ್ಥೆಗಳು ಅವಲಂಬಿಸಿರುವ ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಕುಂಬಳಕಾಯಿಯ ಚಿಕ್ಕ ಬೀಜಗಳು ನಾವು ಅಂದಾಜಿಸುವುದಕ್ಕಿಂತ ಹೆಚ್ಚಿನ ಪೋಷಕಾಂಶಗಳಿಂದ ತುಂಬಿವೆ.‌ ಕುಂಬಳಕಾಯಿ ಬೀಜಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು...

ಬಿಜೆಪಿ ಶಾಸಕರ ಮನೆಯಲ್ಲೇ ನೇಣಿಗೆ ಕೊರಳೊಡ್ಡಿದ ಯುವಕ..!

ವಿವೇಕವಾರ್ತೆ : ಬಿಜೆಪಿ ಶಾಸಕರ ಮನೆಯಲಿಯೇ ಯುವಕನೋರ್ವ ನೇಣಿಗೆ ಶರಣಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಭಾನುವಾರ ಲಕ್ನೋದ ಹಜರತ್‌ಗಂಜ್ ಪ್ರದೇಶದಲ್ಲಿ  ನಡೆದಿರುವುದಾಗಿ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಹೈದರ್‌ಗಢ...
error: Content is protected !!