Tuesday, September 26, 2023

ಗೃಹರಕ್ಷಕದಳದ ಇಲಾಖೆಯ ಬಗ್ಗೆ ನಕಲಿ ದೂರು : ಸ್ಪಷ್ಟನೆ ನೀಡಿದ ಕಮಾಂಡಟ್ ಕಿರಣ ನಾಯಿಕ

ಬೆಳಗಾವಿ : ಜಿಲ್ಲಾ ಗೃಹರಕ್ಷಕದಳದ ಇಲಾಖೆಯ ಬಗ್ಗೆ ಸುಳ್ಳು ದೂರು ಅರ್ಜಿ ನೀಡುತ್ತಿರುವ ಕುರಿತು.ಸ್ಪಷ್ಟ ಪಡಿಸಿದ ಕಮಾಂಡಂಟ ಡಾ!ಕಿರಣ ನಾಯಿಕ ಗ್ರಹರಕ್ಷಕದಳಕ್ಕೆ ಸಂಬಂಧಿಸಿದಂತೆ ಕರ್ನಾಟಕ ಗೃಹರಕ್ಷಕದಳ ಸಂಸ್ಥೆಯಲ್ಲಿ ಗೃಹರಕ್ಷಕರು ನಿಷ್ಠಾಮ ಸೇವಕರಾಗಿರುತ್ತಾರೆ. ಗೃಹರಕ್ಷಕರು ವೇತನ ಪಡೆಯುವ ಖಾಯಂ ಸಿಬ್ಬಂದಿಗಳಾಗಿರುವುದಿಲ್ಲ. ಕೇವಲ ತುರ್ತು ಸಮಯದಲ್ಲಿ ಬಂದೋಬಸ್ತ ಕರ್ತವ್ಯಗಳರುವಾಗ ಮಾತ್ರ ಗೌರವ ಧನ ಎಂದು ಪಡೆಯುತ್ತಾರೆ. ಆದ್ದರಿಂದ ಗೃಹರಕ್ಷಕದಳ ಸದಸ್ಯತ್ವ ಹೊಂದಿದ ಮಾತ್ರಕ್ಕೆ ಯಾವುದೇ ತರಹದ ಆರ್ಥಿಕ ಲಾಭ ಇರುವುದಿಲ್ಲ. ಹಾಗೂ ಗೃಹರಕ್ಷಕರಾದ ಮಾತ್ರಕ್ಕೆ ಯಾವುದೇ ರೀತಿಯಿಂದ ಜೀವನ ಆಧಾರ ಇರುವುದಿಲ್ಲ.

ಗೃಹರಕ್ಷಕದಳ ಒಂದು ನಿಷ್ಠಾಮ ಸೇವೆಯಾಗಿದ್ದು, ಈ ಸಂಸ್ಥೆಯಲ್ಲಿ ಅವರ ವೃತ್ತಿ ಜೀವನದ ಜೊತೆಗೆ ಒಂದು ಸಮಾಜ ಸೇವೆ ಮಾಡುವ ಮನೋಭಾವ ಇಚ್ಛೆಯುಳ್ಳವರನ್ನು ನಿಯಮಾನುಸಾರ ನೋಂದಣಿ ಮಾಡಿಕೊಳ್ಳಲಾಗುತ್ತದೆ.

ಗೃಹರಕ್ಷಕರ ಸೇವಾ ಅವಧಿಯು ಮೂರು ವರ್ಷಗಳಾಗಿದ್ದು, ಪ್ರತಿ ಮೂರು ವರ್ಷಗಳಗೊಮ್ಮೆ ನವೀಕರಣ ಪ್ರಕ್ರೀಯೆಯನ್ನು ನಿಯಮಾನುಸಾರ ಕಡ್ಡಾಯವಾಗಿ ಮಾಡಬೇಕಾಗಿರುತ್ತದೆ. ಆದರೆ ಸುಮಾರು 10-15 ವರ್ಷಗಳಿಂದ ನವೀಕರಣ ಪ್ರಕ್ರೀಯೆಯನ್ನು ಕೈಗೊಂಡಿರುವುದಿಲ್ಲ.

ಸದರಿ ವಿಷಯದ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾನ್ಯರವರ ಆದೇಶದ ಮೇರೆಗೆ ಹಾಗೂ ನಿಯಮಾನುಸಾರ ಎಲ್ಲ ಘಟಕಾಧಿಕಾರಿಗಳಿಂದ ಅರ್ಜಿಗಳನ್ನು ಸ್ವೀಕರಿಸಿ ಅವರ ಶಿಫಾರಸ್ಸು ಹಾಗೂ ಕಚೇರಿಯ ಬೋಧಕರ ಪರಿಶೀಲನೆ ಮೇರೆಗೆ ನವೀಕರಣ ಪ್ರಕ್ರೀಯೆ ಮಾಡಲಾಗಿರುತ್ತದೆ.

ನವೀಕರಣ ಪ್ರಕ್ರೀಯೆಲ್ಲ ಕೆಲವು ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಬೆಳಗಾವಿ ಗೃಹರಕ್ಷಕದಳದ ಕೆಲವು ಘಟಕಾಧಿಕಾರಿಗಳು ಹಾಗೂ ಪ್ರಭಾರ ಘಟಕಾಧಿಕಾರಿಗಳು ಅವರವರ ವೈಯಕ್ತಿಕ ಸ್ವಾರ್ಥಕ್ಕೆ ಮತ್ತು ಅವರ ಕರ್ತವ್ಯದ ಲೋಪದೋಷಗಳನ್ನು ಮರೆಮಾಚಲು ದುರುದ್ದೇಶದಿಂದ ಗೃಹರಕ್ಷಕರನ್ನು ಪ್ರಚೋದಿಸಿ ಆಡಳತ ಹಿತದೃಷ್ಟಿಯಿಂದ ಹಾಗೂ ಮಾನಸಿಕವಾಗಿ ನಮಗೆ ತೊಂದರೆ ಉಂಟು ಮಾಡುತ್ತಿರುತ್ತಾರೆ.ಗೃಹರಕ್ಷಕದಳ ಒಂದು ಸಮವಸ್ತ್ರದಾರಿ ಇಲಾಖೆಯಾಗಿದ್ದು, ಇಲ್ಲ ಎಲ್ಲ ಕಾರ್ಯ ಕರ್ತವ್ಯಗಳು ಸರ್ಕಾರದ ನಿಯಮಾನುಸಾರ ಹಾಗೂ ಕಾನೂನು ಬದ್ಧವಾಗಿ ನಡೆಯುತ್ತವೆ. ಈಗಾಗಲೇ ಇಲಾಖೆಯಿಂದ ಸಮಾಲೋಪನೆಗೊಂಡ ಗೃಹರಕ್ಷಕರು ವಿವಿಧ ದಿನಪತ್ರಿಕೆ, ಸಂಘ ಸಂಸ್ಥೆಗಳು, ರಾಜಕೀಯ ವ್ಯಕ್ತಿಗಳ ಹಾಗೂ ಸರ್ಕಾರಿಯ ಹಿರಿಯ ಅಧಿಕಾರಿಗಳಗೆ ಸುಳ್ಳು ದೂರು ನೀಡುತ್ತಿದ್ದಾರೆ’ ಎಂಬ ವಿಷಯ ತಿಳಿದು ಬಂದಿರುತ್ತದೆ.

ಈಗಾಗಲೆ ಹಿಂದಿನ ಘಟಕಾಧಿಕಾರಿಗಳಾದ ಶ್ರೀ ಬಸವರಾಜ ಸಿ. ಹಂಡಗಿ ಸ್ಟಾಪ್ ಆಫೀಸರ್, ಶ್ರೀ. ಸಂಜಯ ಡಿ ನಿಂಬಾಳಕರ, ನಿಪ್ಪಾಣಿ ಘಟಕ, ಶ್ರೀ. ಮಹಾಂತೇಶ ಎಸ್., ಕಿತ್ತೂರ, ಗುರ್ಲಹೊಸೂರ ಘಟಕ, ಶ್ರೀ. ಸುರೇಶ ಡಿ, ಲಾಡರ, ಸವದತ್ತಿ ಘಟಕ, ಚಿಕ್ಕೋಡಿ ಘಟಕದ ಘಟಕಾಧಿಕಾರಿ ಶ್ರೀ ಅಮರಜೀತ ಐ, ಪಟ್ಟ, ಶ್ರೀ. ಸುರೇಶ ಡಿ. ಫಸ್ತಿ, ಗೃಹರಕ್ಷಕ ಯಮಕನಮರ್ಡಿ ಘಟಕ ಹಾಗೂ ಇಲಾಖೆಯ ನಿವೃತ್ತಿಗೊಂಡ ಮತ್ತು ಹಾಲಿಯಲ್ಲಿರುವ ಕೆಲವು ಅಧಿಕಾರಿ ಮತ್ತು ಸಿಬ್ಬಂದಿ, ಸಮಾಲೋಪನೆಗೊಂಡ ಗೃಹರಕ್ಷಕರು ಕೂಡಿಕೊಂಡು ಗುಂಪುಗಾರಿಕೆ ಮಾಡಿ ಇಲಾಖೆಗೆ ಕಪ್ಪು ಚುಕ್ಕೆ ಬರುವಂತೆ ಮಾಡುತ್ತಿರುತ್ತಾರೆ ಎಂಬ ಮಾಹಿತಿ ಬಂದಿರುವುದರಿಂದ ಇವರ ಮೇಲೆ ತನಿಖೆ ಪ್ರಕ್ರಿಯೆಯಲ್ಲಿರುತ್ತದೆ ಎಂಬ ವಿಷಯವನ್ನು ತಿಳಸಬಯಸುತ್ತೇನೆ!

ಚುನಾವಣೆ ಸಂದರ್ಭದಲ್ಲಿ, ತುರ್ತು ಸಮಯದಲ್ಲ. (VVIP) ಗಣ್ಯ ವ್ಯಕ್ತಿಗಳು ಜಿಲ್ಲೆಗೆ ಭೇಟಿ ನೀಡುವ ಸಂದರ್ಭದಲ್ಲ. ಮೇಲೆ ಸೂಚಿಸಿರುವ ಜನರು ರಾಷ್ಟ್ರಪತಿಗಳಿಗೆ, ಪ್ರದಾವಿನಂತಿಸಲಾಗಿದೆ, ಮುಖ್ಯ ಮಂತ್ರಿಗಳಿಗೆ, ಗೃಹ ಮಂತ್ರಿಗಳಿಗೆ, ಚುನಾವಣಾ ಆಯೋಗಕ್ಕೆ ಹೀಗೆ ಹಲವಾರು ಗಣ್ಯ ವ್ಯಕ್ತಿಗಳಿಗೆ ಹಾಗೂ ಸರ್ಕಾರಿಯ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಸುಳ್ಳು ದೂರು ನೀಡಿ ಇಲಾಖೆಯ ಹಾಗೂ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಬಗ್ಗೆ ತಪ್ಪು ಭಾವನೆ ಸೃಷ್ಟಿಸಿ ಕಳಂಕ ಬರುವ ಕೆಲಸ ಮಾಡಿ ಮಾನಸಿಕವಾಗಿ ತೊಂದರೆ ನೀಡುತ್ತಿದ್ದಾರೆ. ಈ ಹಿಂದೆಯೂ ಕಮಾಂಡಂಟ್‌ ಹಾಗೂ ಪ್ರಭಾರ ಕಮಾಂಡಂಟ್‌ರಾಗಿ ಕಾರ್ಯ ನಿರ್ವಹಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಿಗೂ ಇದೇ ರೀತಿ ಕಾಡಿರುತ್ತಾರೆ.

ಆದ್ದರಿಂದ ಸದರಿ ವಿಷಯದ ಬಗ್ಗೆ ಯಾವುದೇ ತರಹ, ಯಾರಿಂದಲಾದರೂ ತಮ್ಮಲ್ಲ ದೂರು ಮನವಿ ಬಂದಲ್ಲಿ ಕೂಲಂಕುಶವಾಗಿ ಪರಿಶೀಲಿಸಿ ಇಲಾಖೆಯ ಹಾಗೂ ಇಲಾಖೆಯ ನಿಷ್ಠಾವಂತ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಹಿತದೃಷ್ಟಿಯನ್ನು ಪರಿಗಣಿಸಿ ಸುಳ್ಳು ದೂರುಗಳನ್ನು ನೀಡುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಾನ್ಯರವರಲ್ಲಿ ವಿನಂತಿಸಲಾಗಿ

ಡಾ. ಕಿರಣ ರುದ್ರಾ ನಾಯ್ಕ, ಪಿ.ಹೆಚ್.ಡಿ ಜಿಲ್ಲಾ ಕಮಾಂಡಂಟ
ಗೃಹರಕ್ಷಕದಳ, ಬೆಳಗಾವಿ ಜಿಲ್ಲೆ.

ವರದಿ- ಬ್ರಹ್ಮಾನಂದ ಪತ್ತಾರ

RELATED ARTICLES

ಸಹಾಯಕ ಸರಕಾರಿ ವಕೀಲರಾಗಿ ಆಯ್ಕೆಯಾದ ಮಹಾವೀರ ಗಂಡವ್ವಗೋಳ ಅವರಿಗೆ ಕನ್ನಡ ಸೇನೆಯಿಂದ ಸತ್ಕಾರ

ವಿವೇಕವಾರ್ತೆ :ಕರ್ನಾಟಕ ಸರ್ಕಾರದ ಅಭಿಯೋಜನೆಯ ಇಲಾಖೆಯಲ್ಲಿ ಸಹಾಯಕ ಸರಕಾರಿ ಅಭಿಯೋಜನೆಕಾರರು-ವ- ಸಹಾಯಕ ಸರಕಾರಿ ವಕೀಲರು (APP) ಆಯ್ಕೆ ಆಗಿ ಬೆಳಗಾವಿ ಜಿಲ್ಲೆಯ ನ್ಯಾಯಾಲಯದಲ್ಲಿ ಅಭಿಯೋಜನೆಕಾರರಾಗಿ ಆಯ್ಕೆಯಾದ ಮಹಾವೀರ ಗಂಡವ್ವಗೋಳ ಅವರಿಗೆ ಕನ್ನಡ ಸೇನೆ...

ಬೆಳಗಾವಿ : ಲಾಡ್ಜ್​​ನಲ್ಲಿ ವೈಶ್ಯಾವಾಟಿಕೆ ದಂಧೆ ; ಇಬ್ಬರು ಯುವತಿಯರ ರಕ್ಷಣೆ.!

ವಿವೇಕವಾರ್ತೆ : ಜಿಲ್ಲೆಯ  ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಇಬ್ಬರು ಯುವತಿಯರನ್ನು ರಕ್ಷಣೆ ಮಾಡಲಾಗಿದೆಂದು ಮಾಹಿತಿ ಲಭ್ಯವಾಗಿದೆ. ಕುಡಚಿ ಪಟ್ಟಣದ ಲಾಡ್ಜ್ ಒಂದರಲ್ಲಿ...

ಸುವರ್ಣ ವಿಧಾನಸೌಧ ಬಳಿ ಮಗುಚಿದ ರಾಜ್ಯ ಸಾರಿಗೆ ಬಸ್..!

ವಿವೇಕವಾರ್ತೆ : ಬೆಳಗಾವಿ-ಕೆ.ಕೆ.ಕೊಪ್ಪ ನಡುವೆ ಸಂಚರಿಸುವ ಬಸ್ ಸುವರ್ಣ ವಿಧಾನಸೌಧದ ಬಳಿ ರಸ್ತೆ ಪಕ್ಕ ಮಗುಚಿದ ಪರಿಣಾಮ ಬಸ್ಸಿನಲ್ಲಿದ್ದವರು ಗಾಯಗೊಂಡಿದ್ದಾರೆ. ದುರದೃಷ್ಟವಶಾತ್ ಬಸ್ಸಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇರಲಿಲ್ಲ. ಜೊತೆಗೆ ತುಸು ವಾಲಿದೆ. ಪೂರ್ಣ...
- Advertisment -

Most Popular

ಬ್ಯಾಕ್ ಪ್ಲಿಪ್ ಮಾಡಲು ಹೋಗಿ ಫೇಲ್ ಆದ ಯುವಕ : ‘ಇದರ ಅಗತ್ಯ ಇತ್ತೇ’ ಎಂದ ನೆಟ್ಟಿಗರು ; ವಿಡಿಯೋ ವೈರಲ್.!

ವಿವೇಕವಾರ್ತೆ : ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಕೆಲ ಯುವಕ ಯುವತಿಯರ ಹುಚ್ಚಾಟದ ವಿಡಿಯೋಗಳು ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರೈಲಿನ ಬೋಗಿಯೊಳಗೆ ವಿಡಿಯೋ ಚಿತ್ರೀಕರಣದ ನಿಷೇಧದ ಹೊರಾತಗಿಯೂ ಇಂಥ ಪ್ರವೃತ್ತಿಗಳು ಮುಂದುವರೆಯುತಲೇ ಇವೆ. ಆ...

ಕಾರಿಗೆ ಡಿಕ್ಕಿ ಹೊಡೆದ ಲಾರಿ : ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವು..!

ವಿವೇಕವಾರ್ತೆ : ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿ ಕಾರಿಗೆ ಲಾರಿ ಡಿಕ್ಕಿಯಾದ ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾದ ನಡೆದಿದೆ. ಮೃತ ದುರ್ದೈವಿಗಳನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆಕಾಶ್ (20), ಹೇಮಂತ್ (28)...

ಕುಂಬಳಕಾಯಿ ಬೀಜ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು.!

ವಿವೇಕವಾರ್ತೆ : ಕುಂಬಳಕಾಯಿ ಬೀಜಗಳು ತುಂಬಾ ಚಿಕ್ಕದಾಗಿದ್ದರೂ, ನಮ್ಮ ವ್ಯವಸ್ಥೆಗಳು ಅವಲಂಬಿಸಿರುವ ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಕುಂಬಳಕಾಯಿಯ ಚಿಕ್ಕ ಬೀಜಗಳು ನಾವು ಅಂದಾಜಿಸುವುದಕ್ಕಿಂತ ಹೆಚ್ಚಿನ ಪೋಷಕಾಂಶಗಳಿಂದ ತುಂಬಿವೆ.‌ ಕುಂಬಳಕಾಯಿ ಬೀಜಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು...

ಬಿಜೆಪಿ ಶಾಸಕರ ಮನೆಯಲ್ಲೇ ನೇಣಿಗೆ ಕೊರಳೊಡ್ಡಿದ ಯುವಕ..!

ವಿವೇಕವಾರ್ತೆ : ಬಿಜೆಪಿ ಶಾಸಕರ ಮನೆಯಲಿಯೇ ಯುವಕನೋರ್ವ ನೇಣಿಗೆ ಶರಣಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಭಾನುವಾರ ಲಕ್ನೋದ ಹಜರತ್‌ಗಂಜ್ ಪ್ರದೇಶದಲ್ಲಿ  ನಡೆದಿರುವುದಾಗಿ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಹೈದರ್‌ಗಢ...
error: Content is protected !!